Advertisement
Related Articles
Advertisement
ಯಕ್ಷಗಾನ ಗುರು, ಯಕ್ಷನೃತ್ಯ ಕಲಾನಿಲಯ ಚಾರಿಟೆಬಲ್ ಟ್ರಸ್ಟ್ ಮುಂಬಯಿ ಇದರ ಸ್ಥಾಪಕ ಕಟೀಲು ಸದಾನಂದ ಶೆಟ್ಟಿ ಅವರು ಮಾತನಾಡಿದರು. ಶ್ರೀ ಕಟೀಲು ಯಕ್ಷಕಲಾ ವೇದಿಕೆಯ ಕಾರ್ಯಾಧ್ಯಕ್ಷ ಪಾಂಡು ಎಲ್. ಶೆಟ್ಟಿ ಸಂಸ್ಥೆಯ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಗೌರವಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ ಮಾತನಾಡಿ ಶುಭ ಹಾರೈಸಿದರು. ಕರ್ನೂರು ಶಂಕರ ಆಳ್ವ ವಂದಿಸಿದರು.
ವೇದಿಕೆಯಲ್ಲಿ ನಗರ ಸೇವಕ ನಾರಾಯಣ ಜಿ. ಮಾನ್ಕರ್, ಪುಷ್ಪಾ ಜಾಧವ್, ಉಮಾ ಪಾಟೀಲ್, ಕಲಾ ಪೋಷಕರಾದ ಎಂ. ಎಂ. ಹರೀಶ್ ಶೆಟ್ಟಿ ಗುರ್ಮೆ, ಅಶೋಕ್ ಶೆಟ್ಟಿ ಕಲ್ಪವೃಕ್ಷ, ಪದಾಧಿಕಾರಿಗಳಾದ ಎಚ್. ಜಿ. ಕುಂದರ್, ಭೋಜ ಟಿ. ಅಂಚನ್, ದೇವೇಂದ್ರ ಬುನ್ನನ್, ಭಾರತಿ ಶೆಟ್ಟಿ, ಅನಿತಾ ಬುನ್ನನ್, ಮೋಹಿನಿ ಮಲ್ಪೆ, ಭಾಸ್ಕರ ಶೆಟ್ಟಿ, ಜಯಾ ಅಶೋಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀ ಕಟೀಲು ಯಕ್ಷಕಲಾ ವೇದಿಕೆಯ ಬಾಲ ಕಲಾವಿದೆಯರಿಂದ ಸುದರ್ಶನ ಗರ್ವಭಂಗ ಮತ್ತು ಕುಶ-ಲವ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು. ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಅಣ್ಣನ ಕನಸಿನ ಕೂಸು ಶ್ರೀ ಕಟೀಲು ಯಕ್ಷಕಲಾ ವೇದಿಕೆ ಸಾಕಾರಗೊಂಡು ಪ್ರತಿಭಾವಂತ ಪುಟಾಣಿ ಕಲಾವಿದರನ್ನು ಹೊಂದಿದೆ. ಸಮಾಜವೇ ನನ್ನ ಕುಟುಂಬ ಎಂಬ ನೆಲೆಯಲ್ಲಿ ಸೇವೆಗೈದ ಅಣ್ಣನ ಪ್ರೀತಿ ಈ ಜನ ಸಾಗರದಲ್ಲಿ ಪ್ರತಿಧ್ವನಿಸುತ್ತಿದೆ
– ಕರ್ನಿರೆ ವಿಶ್ವನಾಥ ಶೆಟ್ಟಿ (ಮಾಜಿ ಅಧ್ಯಕ್ಷರು: ಬಂಟರ ಸಂಘ ಮುಂಬಯಿ). ಜಾತಿ ಮತ ಭೇದ ಇಲ್ಲದೆ ಸಮಾಜ ಸೇವೆ ನಮ್ಮದಾಗಬೇಕು. ಪ್ರತೀ ವರ್ಷ ಜನಮಾನಸದಲ್ಲಿ ಶಾಶ್ವತವಾಗಿರುವ ಕಾರ್ಯಕ್ರಮಗಳು ವಸಾಯಿ ಕರ್ನಾಟಕ ಸಂಘದಲ್ಲಿ ಜರಗಲಿ
– ಲಯನ್ ಕೆ. ಟಿ. ಶಂಕರ್ (ಸಮಾಜ ಸೇವಕರು). ಮಕ್ಕಳಿಗೆ ಜವಾಬ್ದಾರಿಯ ಅರಿವನ್ನು ಮೂಡಿಸಬೇಕು. ಪಠ್ಯೇತರ ಚಟುವಟಿಕೆಗಳಿಂದ ದೈಹಿಕ, ಮಾನಸಿಕ, ಬುದ್ಧಿ ಕೌಶಲಗಳು ವಿಕಾಸನಗೊಳ್ಳಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ವಸಾಯಿ ಕರ್ನಾಟಕ ಸಂಘ ತೊಡಗಿರುವುದು ಅಭಿನಂದನೀಯ
– ಎಲ್. ವಿ. ಅಮೀನ್ (ಅಧ್ಯಕ್ಷರು: ಕರ್ನಾಟಕ ಸಂಘ ಸಾಂತಾಕ್ರೂಜ್). ವಸಾಯಿ ಪರಿಸರದಲ್ಲಿ ವಿವಿಧ ಸಂಘಟನೆಗಳನ್ನು ಒಂದೇ ಸೂರಿನಡಿ ಬೆಳೆಸಿದ ದಿ| ಕರ್ನಿರೆ ಶ್ರೀಧರ ಶೆಟ್ಟಿ ಅವರು ಜಾತೀಯ ಮೇರೆಯನ್ನು ಮೀರಿ, ಸಮಾನತೆಯೊಂದಿಗೆ ಬೆಳೆದವರು. ಅವರ ಸಮಾನತೆಯ ಸಂದೇಶ ಅನುಷ್ಠಾನಗೊಳಿಸುವುದು ನಮ್ಮ ಕರ್ತವ್ಯವಾಗಿದೆ
– ಶಶಿಧರ ಕೆ. ಶೆಟ್ಟಿ (ಕಾರ್ಯಾಧ್ಯಕ್ಷರು: ಬಂಟರ ಸಂಘ
ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿ).