Advertisement

ಯರವಾಡ ಜೈಲಿಗೆ ವರವರರಾವ್‌ ವಾಪಸ್‌

11:41 PM Jul 06, 2019 | Lakshmi GovindaRaj |

ಪಾವಗಡ: ಎರಡು ದಿನಗಳ ವಿಚಾರಣೆ ಬಳಿಕ ಕ್ರಾಂತಿಕಾರಿ ಕವಿ ವರವರರಾವ್‌ರನ್ನು ಪುಣೆಯ ಯರವಾಡ ಜೈಲಿಗೆ ವಾಪಸ್‌ ಕರೆದುಕೊಂಡು ಹೋಗಲಾಗಿದೆ. ತಿರುಮಣಿ ಪೊಲೀಸ್‌ ಠಾಣಾ ವ್ಯಾಪ್ತಿಯ ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ ನಡೆದ ಪೊಲೀಸ್‌ ಹತ್ಯಾಕಾಂಡಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಯರವಾಡ ಜೈಲಿನಿಂದ ಕರೆ ತಂದು ಪಾವಗಡದ ಜೆಎಂಎಫ್ ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಲಾಗಿತ್ತು. ನ್ಯಾಯಾಧಿಧೀಶ ಭರತ್‌ ಕರಗುದರಿ ಅವರು ವರವರರಾವ್‌ರನ್ನು ಎರಡು ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿದ್ದರು.

Advertisement

ಎರಡು ದಿನಗಳ ಕಾಲ ರಹಸ್ಯ ಪ್ರದೇಶದಲ್ಲಿ ವಿಚಾರಣೆ ನಡೆಸಿದ ಹಿರಿಯ ಪೊಲೀಸ್‌ ಅಧಿಕಾರಿಗಳು ಶನಿವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ, ನ್ಯಾಯಾಧೀಶರ ಒಪ್ಪಿಗೆ ಪಡೆದು ಅವರನ್ನು ಯರವಾಡ ಜೈಲಿಗೆ ಕರೆದುಕೊಂಡು ಹೋಗಲಾಗಿದೆ. ಈ ಪ್ರಕರಣ ಮಧುಗಿರಿ ನ್ಯಾಯಾಲಯದ ವ್ಯಾಪ್ತಿಗೆ ಬರುವುದರಿಂದ ಮುಂದಿನ ದಿನಗಳಲ್ಲಿ ಅವರನ್ನು ಮಧುಗಿರಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next