Advertisement

ಶಿವಲಿಂಗಕ್ಕೆ ಪೂಜೆ: ಅರ್ಜಿ ಸ್ವೀಕಾರ

08:50 PM Nov 17, 2022 | Team Udayavani |

ವಾರಾಣಸಿ: ವಾರಾಣಸಿಯಲ್ಲಿ ಇರುವ ಜ್ಞಾನವಾಪಿ ಮಸೀದಿಯಲ್ಲಿ ಇರುವ ಶಿವಲಿಂಗಕ್ಕೆ ಪೂಜೆ ಮಾಡಲು ಅವಕಾಶ ಕೋರಿ ಸಲ್ಲಿಕೆ ಮಾಡಿರುವ ಅರ್ಜಿಯನ್ನು ಸ್ಥಳೀಯ ಕೋರ್ಟ್‌ ಪುರಸ್ಕರಿಸಿದೆ.

Advertisement

ಅದಕ್ಕೆ ಆಕ್ಷೇಪ ಮಾಡಿದ್ದ ಮಸೀದಿಯ ಸಮಿತಿಯ ಕೋರಿಕೆಯನ್ನು ತ್ವರಿತಗತಿಯ ನ್ಯಾಯಾಲಯದ ನ್ಯಾಯಾಧೀಶ ಮಹೇಂದ್ರ ಕುಮಾರ್‌ ಪಾಂಡೆ ತಿರಸ್ಕರಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಡಿ.2ರಂದು ಕೈಗೆತ್ತಿಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ.

1991ರಲ್ಲಿ ಜಾರಿಯಾಗಿರುವ ಪೂಜಾ ಸ್ಥಳಗಳ ಕಾಯ್ದೆಯ ಅನ್ವಯ ಜ್ಞಾನವಾಪಿ ಮಸೀದಿಯಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಆಡಳಿತ ಮಂಡಳಿ ಪ್ರತಿಪಾದಿಸಿತ್ತು. ಹಿಂದೂ ಸಮುದಾಯದ ಪರ ವಕೀಲರು ವಕ್ಫ್ ಕಾಯ್ದೆಯಲ್ಲಿನ ಅಂಶಗಳು ಅನ್ವಯವಾಗದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next