Advertisement

ವಂಡ್ಸೆ –ಬೆಳ್ಳಾಲ ರಸ್ತೆ 4.35 ಕೋಟಿ ರೂ. ಕಾಮಗಾರಿ ಗುದ್ದಲಿ ಪೂಜೆ

02:52 PM Mar 16, 2018 | Team Udayavani |

ಕೊಲ್ಲೂರು : ವಂಡ್ಸೆಯಿಂದ ಬೆಳ್ಳಾಲ ತನಕ 7.5 ಕಿ.ಮೀ. ರಸ್ತೆ ಡಾಮರೀಕರಣ ಸಹಿತ ಬೆಳ್ಳಾಲ ಗ್ರಾಮದ ಮೋರ್ಟು-ಆಜ್ರಿ ಸಂಪರ್ಕ ಸೇತುವೆಗೆ ಬಿಡುಗಡೆಯಾದ 2.49 ಕೋಟಿ ರೂ. ವೆಚ್ಚದ ಕಾಮಗಾರಿಗೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.

Advertisement

ಈ ಸಂದರ್ಭ ಅವರು ಮಾತನಾಡಿ, ಜನಪರ ಕಾಳಜಿಯಿಂದ ಗ್ರಾಮೀಣ ಜನರ ಬೇಡಿಕೆ ಹುಸಿ ಯಾಗದಂತೆ ಮೂಲಸೌಕರ್ಯ ಒದಗಿಸಲಾಗುತ್ತಿದೆ. ವಂಡ್ಸೆಯಿಂದ ಬೆಳ್ಳಾಲ ತನಕ 4.35 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭ ಗೊಂಡಿದೆ. ಆದರ್ಶ ಗ್ರಾಮ ಯೋಜನೆಯ ಹೆಸರಲ್ಲಿ ಪ್ರಚಾರ ಪಡಕೊಂಡ ಕೆರಾಡಿ ಗ್ರಾಮದಲ್ಲಿನ ಅಭಿವೃದ್ಧಿ ಕಾರ್ಯ ಅಲ್ಲೇ ನಿಂತಿರುವುದು ದುರದೃಷ್ಟಕರ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶ್ವಾಸನೆ ಬಹುತೇಕ ಹುಸಿಯಾಗಿದೆ ಎಂದು ಹೇಳಿದರು.

ತಾ.ಪಂ. ಸದಸ್ಯ ಉದಯ ಜಿ. ಪೂಜಾರಿ, ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಚಂದ್ರಶೇಖರ್‌, ಜೆ.ಇ. ಮಂಜುನಾಥ, ಎಪಿಎಂಸಿ ನಿರ್ದೆಶಕ ಸಂಜೀವ ಪೂಜಾರಿ, ಪ್ರಸನ್ನ ಕುಮಾರ ಶೆಟ್ಟಿ, ಚಿತ್ತೂರು ಗ್ರಾ.ಪಂ. ಉಪಾಧ್ಯಕ್ಷ ಅಣ್ಣಪ್ಪ ನಾಯ್ಕ, ಅರ್ಜಿ ಕರುಣಾಕರ ಶೆಟ್ಟಿ, ವಂಡ್ಸೆ ಸಿ.ಎ. ಬ್ಯಾಂಕ್‌ನ ಮಾಜಿ ಅಧ್ಯಕ್ಷ ಸುಧೀರ್‌ ಕುಮಾರ್‌ ಶೆಟ್ಟಿ, ಮೆಸ್ಕಾಂ ನಿರ್ದೇಶಕ ಸಂಪಿಗೇಡಿ ಸಂಜೀವ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next