Advertisement

ನಮ್ಮ ರಾಜ್ಯದಲ್ಲಿ ವಂದೇ ಭಾರತ್ ಗೆ ಕಲ್ಲು ತೂರಾಟ ನಡೆದಿಲ್ಲ: ಮಮತಾ ಬ್ಯಾನರ್ಜಿ

06:47 PM Jan 05, 2023 | Team Udayavani |

ಕೋಲ್ಕತಾ : ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ನೆರೆಯ ಬಿಹಾರದಲ್ಲಿ ಕಲ್ಲು ತೂರಾಟ ನಡೆಸಲಾಗಿದೆಯೇ ಹೊರತು ತಮ್ಮ ರಾಜ್ಯದಲ್ಲಿ ಅಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.

Advertisement

ಪಶ್ಚಿಮ ಬಂಗಾಳದಲ್ಲಿ ಘಟನೆಗಳು ನಡೆದಿದೆ ಎಂದು ರಾಜ್ಯಕ್ಕೆ ಕೆಟ್ಟ ಹೆಸರು ಬರುವಂತೆ ನಕಲಿ ಸುದ್ದಿ ಹಬ್ಬಿಸಿದ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

”ವಂದೇ ಭಾರತ ವಿಶೇಷವೇನಲ್ಲ. ಇದು ಹೊಸ ಎಂಜಿನ್‌ನೊಂದಿಗೆ ನವೀಕರಿಸಿದ ಹಳೆಯ ರೈಲು ಎಂದು ಅವರು ಹೇಳಿದರು.

ಜನವರಿ 8 ರಂದು ಪ್ರಾರಂಭವಾಗುವ ಗಂಗಾಸಾಗರ ಮೇಳದ ಸಿದ್ಧತೆಗಳನ್ನು ನೋಡಿಕೊಳ್ಳಲು ಮಮತಾ ಬ್ಯಾನರ್ಜಿ  ಸಾಗರ್  ದ್ವೀಪಕ್ಕೆ ಎರಡು ದಿನಗಳ ಭೇಟಿಯನ್ನು ಮುಕ್ತಾಯಗೊಳಿಸಿದರು.

ಹೌರಾ-ನ್ಯೂ ಜಲ್ಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಕೆಲವು ದಿನಗಳ ನಂತರ ಮಂಗಳವಾರ ಎರಡನೇ ಬಾರಿಗೆ ಕಲ್ಲು ತೂರಾಟ ನಡೆಸಲಾಗಿತ್ತು. ರೈಲಿಗೆ ಕಲ್ಲು ಎಸೆದವರನ್ನು ಗುರುತಿಸಿರುವುದಾಗಿ ರೈಲ್ವೆ ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ಈ ಘಟನೆಯು ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಜಟಾಪಟಿಗೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next