Advertisement

ಗಂಗಾವತಿ: ವಾಲ್ಮೀಕಿ ಸಮುದಾಯದ ಯುವಕರು ಸಂಘಟನೆಯ ಜೊತೆಗೆ ಉನ್ನತ ಹುದ್ದೆಗೆ ಏರಬೇಕು

04:27 PM Nov 06, 2022 | Team Udayavani |

ಗಂಗಾವತಿ: ಅತ್ಯಂತ ಹಿಂದುಳಿದ ವಾಲ್ಮೀಕಿ ಸಮುದಾಯದ ಯುವಕರು ಸಂಘಟನೆಯ ಜೊತೆಗೆ ಉನ್ನತ ವಿದ್ಯಾಭ್ಯಾಸದೊಂದಿಗೆ ಉನ್ನತ ಹುದ್ದೆಯಲ್ಲಿ ಇರಬೇಕೆಂದು ಬಿಜೆಪಿ ಯುವ ಮುಖಂಡ ಚನ್ನಕೇಶವ ಹೇಳಿದರು.

Advertisement

ಅವರು ತಾಲೂಕಿನ ವಡ್ಡರಹಳ್ಳಿ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕೆಲವರು ಸಮುದಾಯದ ಯುವಕರನ್ನು ಬಳಕೆ ಮಾಡಿ, ಅವರಿಗೆ ರಾಜಕೀಯ ಹಾಗೂ ಆರ್ಥಿಕವಾಗಿ ನಿರ್ಲಕ್ಷ್ಯ ಮಾಡುತ್ತಾರೆ. ಇದನ್ನು ತಿಳಿದುಕೊಂಡು ಸಮುದಾಯದ ಯುವಕರು ಎಲ್ಲ ಸಮುದಾಯಗಳ ಪ್ರೀತಿ ಗಳಿಸುವ ಮೂಲಕ ಸಂಘಟಿತರಾಗಿ ಸಮಾಜದ ಬೆಳವಣಿಗೆಗೆ ಕೆಲಸ ಮಾಡುವಂತಾಗಬೇಕು ಎಂದರು.

ಜಯಂತ್ಯೋತ್ಸವದಲ್ಲಿ ಬಿಜೆಪಿ ಮುಖಂಡ ಸಿಂಗನಾಳ ವಿರುಪಾಕ್ಷಪ್ಪ, ಕಾಡ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಟಿ. ರಾಮಣ್ಣ ಗೌಡ, ಟಿ. ದುರ್ಗಪ್ಪ ನಾಯಕ, ಟಿ. ಬುಡ್ಡಪ್ಪ ನಾಯಕ, ಷಣ್ಮುಖ ಗೌಡ, ಚಿನ್ನಪ್ಪ ನಾಯಕ, ಚಂದ್ರು ನಾಯಕ, ಸಿದ್ಧಪ್ಪನಾಯಕ, ಸಂದೀಪ್ ನಾಯಕ, ಶಿವರಾಮ್ ನಾಯಕ, ಕಾಳಿಂಗ ನಾಯಕ, ರಾಜು ನಾಯಕ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next