Advertisement

ಕಣಿವೆ ಮಾರಮ್ಮನ ರಥೋತ್ಸವ

05:09 PM Jun 01, 2018 | |

ಭದ್ರಾವತಿ: ಕಡದಕಟ್ಟೆ ಗ್ರಾಮದಲ್ಲಿರುವ ಶ್ರೀ ಕಣಿವೆ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು. ಸೋಮವಾರ ಬೆಳಗ್ಗೆ ಧ್ವಜಾರೋಹಣ, ನಂತರ ಹೆಬ್ಬಂಡಿ ಗ್ರಾಮಸ್ಥರಿಂದ ಮದುವಣಗಿತ್ತಿ ಕಾರ್ಯದಿಂದ ಆರಂಭಗೊಂಡಿದ್ದ ಕಣಿವೆ ಮಾರಮ್ಮನ ಜಾತ್ರಾ ಮಹೋತ್ಸವ ಮಂಗಳವಾರ ಗಂಗೆಪೂಜೆ, ಹುಚ್ಚಾಯ ತೇರಿನಬಲಿ ಪೂಜೆ, ಕಳಸಾರೋಹಣ, ದುರ್ಗಾಹೋಮ, ಕಂಕಣ ಧಾರಣೆಧಾರಾ ಮಹೋತ್ಸವ ನೆರವೇರಿತು.

Advertisement

ಬುಧವಾರ ಬೆಳಗ್ಗೆ ಸೂರ್ಯೋದಯ ಕಾಲದಲ್ಲಿ ವರ್ಣಮಯ ಅಲಂಕಾರಗಳಿಂದ ಕಂಗೊಳಿಸುತ್ತಿದ್ದ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಕಣಿವೆ ಮಾರಮ್ಮನ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ದೇವಾಲಯದ ಪ್ರಾಕಾರದಲ್ಲಿ ಪ್ರದಕ್ಷಿಣಾ ಉತ್ಸವ ನಡೆಸಲಾಯಿತು. ನಂತರ ರಥದಲ್ಲಿ ಉತ್ಸವಮೂರ್ತಿಯನ್ನು ಇರಿಸಲಾಯಿತು. ದೇವರನ್ನು ರಥದಲ್ಲಿ ಕೂರಿಸುತ್ತದ್ದಂತೆ ಸಾವಿರಾರು ಸಂಖ್ಯೆಯಲ್ಲಿದ್ದ ಭಕ್ತಾದಿಗಳು ದೇವಿಗೆ ಜಯಕಾರ ಹಾಕಿದರು.

ಕಡದಕಟ್ಟೆ, ಬಂಡಾರಹಳ್ಳಿ, ಭದ್ರಾವತಿ ನಗರ ಸೇರಿದಂತೆ ಸುತ್ತಮುತ್ತ ಅನೇಕ ಗ್ರಾಮಗಳಿಂದ ರಥೋತ್ಸವಕ್ಕೆ
ಸಾವಿರಾರು ಜನರು ಆಗಮಿಸಿದ್ದರು. ದೇವಿಗೆ ಆರತಿ ಮಾಡಿದ ನಂತರ ಜನರು ದೇವಿಗೆ ಜಯಕಾರ ಹಾಕುತ್ತಾ ರಥದ ಮೇಲೆ ಬಾಳೆ ಹಣ್ಣು ಕರಿ ಕಾಳುಮೆಣಸನ್ನು ಬೀರಿದರು. ನಂತರ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ಬೇವಿನ ಸೀರೆ ಕಾರ್ಯಕ್ರಮ ನೆರವೇರಿತು.

ಗುರುವಾರ ಬೆಳಗ್ಗೆ ಓಕುಳಿ ಹಾಗೂ ಸಂಜೆ ಹೂವಿನ ಅಲಂಕಾರದೊಂದಿಗೆ ದೇವಿಯ ರಾಜಬೀದಿ ಉತ್ಸವ ನಡೆಸಲಾಯಿತು. ದೇವಾಲಯದ ಸಮಿತಿ ಹಾಗೂ ಗ್ರಾಮಸ್ಥರು ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ತೀರ್ಥಪ್ರಸಾದ, ಅನ್ನ ದಾನದ ವ್ಯವಸ್ಥೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next