Advertisement
ಸೈನಿಕ ಮತ್ತು ಅರೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಶುಕ್ರವಾರ ರಾಜಭವನದಲ್ಲಿ ಆಯೋಜಿಸಿದ್ದ “ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ’ ಕಾರ್ಯಕ್ರಮದಲ್ಲಿ ಧ್ವಜ ಬಿಡುಗಡೆ ಮಾಡಿ ಮಾತನಾಡಿದ ಅವರು, ವಯೋ ವೃದ್ಧರು, ಮಕ್ಕಳಿಗೆ ನಾವು ಸಹಾಯ ಮಾಡದಿದ್ದರೂ ಪರವಾಗಿಲ್ಲ. ಆದರೆ, ದೇಶಕ್ಕಾಗಿ ತಮ್ಮ ಪ್ರಾಣ ಬಲಿದಾನ ನೀಡಿದ ಸೈನಿಕರು ಹಾಗೂ ಪೊಲೀಸರ ಕುಟುಂಬಗಳಿಗೆ ಆಸರೆಯಾಗಬೇಕು ಎಂದರು.
Related Articles
Advertisement
ಸಿಎಂ, ಡಿಸಿಎಂ ಗೈರು: ರಾಜ್ಯ ಸರ್ಕಾರದ ಸೈನಿಕ ಮತ್ತು ಅರೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಶುಕ್ರವಾರ ರಾಜಭವನದಲ್ಲಿ ಆಯೋಜಿಸಿದ್ದ ವೀರ ಮರಣ ಹೊಂದಿದ ಸೈನಿಕರ ಕುಟುಂಬಗಳಿಗೆ ನೆನಪಿನ ಕಾಣಿಕೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೈರಾಗಿದ್ದರು.
ಸಿಪಾಯಿ ಪತ್ನಿಯರಿಗೆ ಕನಿಷ್ಠ 18 ಸಾವಿರ ಪಿಂಚಣಿ ಕೊಡಿ: ಮೃತಪಟ್ಟ ಸಿಪಾಯಿಗಳ ಪತ್ನಿಯರಿಗೆ ಅತ್ಯಂತ ಕಡಿಮೆ ಪಿಂಚಣಿ ದೊರೆಯುತ್ತಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಮಾಸಿಕ ಕನಿಷ್ಠ 18 ಸಾವಿರ ರೂ. ಪಿಂಚಣಿ ನೀಡಲು ಸರ್ಕಾರ ಯೋಜನೆ ಜಾರಿಗೊಳಿಸಬೇಕು ಎಂದು ನಿವೃತ್ತ ಏರ್ ಮಾರ್ಷಲ್ ಕೆ.ಎಂ.ರಾಮಸುಂದರ ಸರ್ಕಾರವನ್ನು ಕೋರಿದರು.
ಬಹುತೇಕ ಗ್ರಾಮೀಣ ಭಾಗದಲ್ಲೇ ವಾಸವಿರುವ ಸೈನಿಕರ ಪತ್ನಿಯರು ಹೆಚ್ಚು ಓದಿರುವುದಿಲ್ಲ. ತಂದೆ-ತಾಯಿ ಆಶ್ರಯದಲ್ಲಿರುತ್ತಾರೆ. ಹೀಗಾಗಿ ಮೃತ ಸೈನಿಕರ ಪತ್ನಿಯರಿಗೆ ಸ್ವಂತ ಜಿಲ್ಲೆಯಲ್ಲಿಯೇ ಉದ್ಯೋಗ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ. ಜತೆಗೆ, ಆಸ್ತಿ ತೆರಿಗೆಯಲ್ಲಿ ಸರ್ಕಾರ ಸೈನಿಕರಿಗೆ ಶೇ.50ರಷ್ಟು ವಿನಾಯ್ತಿ ನೀಡಿದರೂ, ಜಂಟಿಯಾಗಿರುವ ಆಸ್ತಿಗಳಲ್ಲಿ ಈ ಸೌಲಭ್ಯ ಪಡೆಯಲಾಗುತ್ತಿಲ್ಲ. ಇಂತಹ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದರು.