ಮಲ್ಪೆ: ವಡಭಾಂಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗದ ರಸ್ತೆಯ ಬದಿಯಲ್ಲಿ ತ್ಯಾಜ್ಯ ರಾಶಿ ಹರಡಿಕೊಂಡಿದ್ದು ನಗರದ ಅಂದವನ್ನು ಕಡೆಸಿದೆ. ನಿತ್ಯ ಸಾವಿರಾರು ಪ್ರವಾಸಿಗರು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು ತತ್ಕ್ಷಣ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯಕ್ಕೆ ಸಂಬಂಧಪಟ್ಟ ಆಡಳಿತ ಮುಂದಾಗಬೇಕಾಗಿದೆ.
ಇಲ್ಲಿನ ನೆರ್ಗಿ 1ನೇ ಕ್ರಾಸ್ನ ದಕ್ಷಿಣ ಮತ್ತು ಪೂರ್ವ ಭಾಗದ ರಸ್ತೆಯ
ಎರಡೂ ಬದಿಯ ಕಾಂಕ್ರೀಟ್ ಚರಂಡಿಯನ್ನು ನಿರ್ಮಿಸಲಾಗಿದೆ. ಚರಂಡಿಯ ಪಕ್ಕವೇ ಮಣ್ಣು ರಾಶಿ ಹಾಕಲಾಗಿದ್ದು ಮುಂದೆ ಮಳೆಗೆ ಮಣ್ಣು ಚರಂಡಿ ಸೇರುವುದರಿಂದ ಚರಂಡಿಯಲ್ಲಿ ನೀರು ಹರಿದು ಹೋಗಲು ಸಮಸ್ಯೆ ಎದುರಾಗಲಿದೆ.
ತತ್ಕ್ಷಣ ಇಲ್ಲಿನ ಮಣ್ಣನ್ನು ತೆರವುಗೊಳಿಸುವಂತೆ ಸ್ಥಳೀಯ ರಾದ ಜೇಮ್ಸ್ ಆ್ಯಂಬ್ಲಿರ್ ಆಗ್ರಹಿಸಿದ್ದಾರೆ.