Advertisement

ಲಸಿಕೆ: ಅಡ್ಡಪರಿಣಾಮ ಇಲ್ಲ

12:21 AM Jan 18, 2021 | Team Udayavani |

ಬೆಂಗಳೂರು: ಕೋವಿಡ್ ಲಸಿಕೆ ಪಡೆದ ಯಾರಿಗೂ ಅಡ್ಡಪರಿಣಾಮ ಆಗಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್‌ ಹೇಳಿದ್ದಾರೆ.

Advertisement

ಸೋಮವಾರದಿಂದ ಹೆಚ್ಚಿನ ಕೇಂದ್ರಗಳಲ್ಲಿ ಅಭಿಯಾನ ನಡೆಯಲಿದೆ ಎಂದಿದ್ದಾರೆ.ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ರವಿವಾರ ಮಾತನಾಡಿ, ಮೊದಲ ದಿನ ಶೇ. 62 ಮಂದಿಗೆ ಲಸಿಕೆ ನೀಡಿರುವುದು ಆಶಾದಾಯಕವಾಗಿದೆ. ಜನರು ಲಸಿಕೆಯ ಮೇಲೆ ವಿಶ್ವಾಸ ವಿಡಬೇಕು. ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಲಸಿಕೆ ವಿತರಣೆ ನಡೆಯಲಿದೆ ಎಂದಿದ್ದಾರೆ.

ಅಡ್ಡಪರಿಣಾಮ ಕಂಡುಬಂದರೆ ಲಸಿಕೆ ತಯಾರಿಕೆ ಕಂಪೆನಿಗಳೇ ಹೊಣೆ ಗಾರರಾಗಿದ್ದು, ಆರೋಗ್ಯ ವೆಚ್ಚ, ಪರಿಹಾರ ಭರಿಸಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. 2ನೇ ಡೋಸ್‌ ಪಡೆದ 10 ದಿನಗಳ ಬಳಿಕ ರೋಗ ನಿರೋಧಕ ಶಕ್ತಿ ಬರುತ್ತದೆ. ಅಲ್ಲಿಯ ವರೆಗೆ ಸುರಕ್ಷಾ ಕ್ರಮಗಳನ್ನು ಪಾಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

2,24,301

ಮಂದಿಗೆ ದೇಶಾದ್ಯಂತ ಲಸಿಕೆ

Advertisement

447

ಮಂದಿಗೆ ಅಡ್ಡ ಪರಿಣಾಮ-  ದೇಶದಲ್ಲಿ

17,072

ಮಂದಿ ರವಿವಾರ ಕರ್ನಾಟಕ ಸಹಿತ 6 ರಾಜ್ಯಗಳಲ್ಲಿ ಲಸಿಕೆ

ಪಡೆದವರು

Advertisement

Udayavani is now on Telegram. Click here to join our channel and stay updated with the latest news.

Next