Advertisement

ಶಾಲೆಯಲ್ಲಿ ಬೀಡುಬಿಟ್ಟ ಗ್ರಾಮಕರಣಿಕರು

12:39 AM Mar 13, 2020 | Team Udayavani |

ಮೂಡುಬಿದಿರೆ: ಮೂರೂ ವರೆ ದಶಕಗಳಿಂದ ಕಾರ್ಯಾಚರಿಸುತ್ತಿದ್ದ ಕಲ್ಲಬೆಟ್ಟು ಗ್ರಾಮಕರಣಿಕರ ಕಚೇರಿಯ ಮೇಲ್ಛಾವಣಿಯು ವಾರದ ಹಿಂದೆ ಕುಸಿದುಬಿದ್ದಿದ್ದು ಸದ್ಯ ಗ್ರಾಮಕರಣಿಕರು ತಮ್ಮ ಸಿಬಂದಿ ಜತೆ ಹತ್ತಿರದ ಸರಕಾರಿ ಶಾಲೆಯ ಕೋಣೆಯೊಂದರಲ್ಲಿ ಆಶ್ರಯ ಪಡೆಯುವಂತಾಗಿದೆ.

Advertisement

ಕಲ್ಲಬೆಟ್ಟು ಶಾಲೆಯ ಆವರಣದ ಬಳಿ ಕಳೆದ 50 ವರ್ಷಗಳ ಹಿಂದೆ ಸರಕಾರದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಿರ್ಮಾಣಗೊಂಡಿರುವ ಸಮಾಜ ಮಂದಿರದ ಕಟ್ಟಡದಲ್ಲಿ ಈ ಹಿಂದೆ ಲೈಬ್ರರಿ, ಕಲ್ಲಬೆಟ್ಟು ಯುವಕ ಮಂಡಲಗಳು ಕರ್ತವ್ಯ ನಿರ್ವಹಿಸುತ್ತಿದ್ದವು. ಊರಿನ ಕೃಷಿ ಚಟುವಟಿಕೆಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿದ್ದವು. ಅನಂತರದ ದಿನಗಳಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ ಇಲಾಖೆ ಅಧಿಕಾರಿಗಳು ಈ ಕಟ್ಟಡವನ್ನು ಆಗಿನ ಮಂಡಲ ಪಂಚಾಯತ್‌ಗೆ ಹಸ್ತಾಂತರಿಸಿದ್ದರು.

ಮುಂದೆ ಕಲ್ಲಬೆಟ್ಟು, ಮಾರೂರು ಹಾಗೂ ಕರಿಂಜೆ ಈ ಮೂರು ಗ್ರಾಮಗಳಿಗೆ ಸಂಬಂ ಧಿಸಿದ ಕಂದಾಯದ ಕೆಲಸಗಳನ್ನು ನಿರ್ವಹಿಸಲು ಈ ಕಟ್ಟಡದಲ್ಲಿ ಗ್ರಾಮಕರಣಿಕರ ಕಚೇರಿ ಯನ್ನು ತೆರೆಯಲಾಯಿತು. ಈ ಮೂರು ಗ್ರಾಮಗಳು ಮೂಡುಬಿದಿರೆ ಪುರಸಭೆಗೆ ಸೇರ್ಪಡೆಗೊಂಡವು. ಕಂದಾಯಕ್ಕೆ ಸಂಬಂ ಧಿಸಿದ ಹೆಚ್ಚಿನ ಕೆಲಸಗಳು ಮೂಡುಬಿದಿರೆಯಲ್ಲಿಯೇ ನಡೆಯುತ್ತಿವೆಯಾದರೂ ಕಲ್ಲಬೆಟ್ಟು ಗ್ರಾಮಕರಣಿಕರಿಗೆ ಮಾತ್ರ ಆ ಕಟ್ಟಡದಲ್ಲಿ ಕರ್ತವ್ಯವನ್ನು ನಿರ್ವಹಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಹಳೆಯದಾಗಿರುವ ಈ ಕಟ್ಟಡದ ಮೇಲ್ಛಾವಣಿ ಇಂದೋ ನಾಳೆಯೋ ಕುಸಿದು ಬೀಳುವಂತಿದ್ದವು. ದಾಖಲೆಗಳನ್ನಿರಿಸಿದ್ದ ಕೋಣೆಯೊಂದರ ಬಾಗಿಲು, ಕಿಟಿಕಿಗಳು ಈ ಹಿಂದೆಯೇ ಮುರಿದುಬಿದ್ದಿದ್ದ ಕಾರಣ ಅ ದಾಖಲೆಗಳನ್ನು ಶಿಥಿಲವಾಗಿದ್ದ ಕಚೇರಿ ಕೋಣೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ಅದೇ ಕೋಣೆಯ ಮೇಲ್ಛಾವಣಿ ಕುಸಿದು ಬಿದ್ದು ತೀವ್ರ ಸಮಸ್ಯೆ ಉಂಟಾಗಿದೆ.

ಶಾಲೆ ಮತ್ತು ಅಂಗನವಾಡಿ ಮಕ್ಕಳು ಸಂಜೆ ವೇಳೆ ಮಕ್ಕಳು ಇಲ್ಲಿಯೇ ಆಟವಾಡುತ್ತಿರುವುದು ಸಾಮಾನ್ಯ. ಸುದೈವವಶಾತ್‌ ಕಟ್ಟಡದ ಮೇಲ್ಛಾವಣಿಯು ರಾತ್ರಿ ವೇಳೆ ಕುಸಿದು ಬಿದ್ದಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಶಾಲೆಯಲ್ಲಿ ಪರೀಕ್ಷೆ -ಇಕ್ಕಟ್ಟು
ಸದ್ಯ ಶಾಲೆಯಲ್ಲಿ ಪರೀಕ್ಷೆಗಳು ನಡೆಯುತ್ತಿರುವ ಈ ವೇಳೆಯಲ್ಲಿ ಗ್ರಾಮ ಕರಣಿಕರ ದಾಖಲೆಗಳನ್ನು ಪೇರಿಸಿಡ ಲಾಗಿರುವುದರಿಂದ ಬಹಳ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಕಂದಾಯ ಇಲಾಖೆ ಹಾಗೂ ಪುರ ಸಭೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕರಣಿಕರಿಗೆ ತಾತ್ಕಾಲಿಕವಾಗಿ ಬೇರೆ ವ್ಯವಸ್ಥೆ ಕಲ್ಪಿಸಿ ಕೊಡಬೇಕಾಗಿದೆ ಮತ್ತು ಶಿಥಿಲ ಕಟ್ಟಡವನ್ನು ದುರಸ್ತಿ ಮಾಡಿಸಬೇಕಾಗಿದೆ.

Advertisement

ಪರಿಶೀಲನೆ ನಡೆಸಲಾಗಿದೆ; ಶೀಘ್ರವೇ ದುರಸ್ತಿಗೆ ಕ್ರಮ
ಪುರಸಭಾ ಎಂಜಿನಿಯರ್‌ ಕಟ್ಟಡದ ಸ್ಥಿತಿಗತಿ ಪರಿವೀಕ್ಷಣೆ ಮಾಡಿದ್ದಾರೆ. ಆಗಬೇಕಾದ ದುರಸ್ತಿ ಕಾರ್ಯದ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ ಸಹಾಯಕ ಕಮಿಶನರ್‌ ಅವರಿಗೆ ಸಲ್ಲಿಸಿ ಅವರ ಒಪ್ಪಿಗೆ ಪಡೆದು ಶೀಘ್ರದಲ್ಲೇ ದುರಸ್ತಿ ಮಾಡಿಸಲಾಗುವುದು.
 - ಇಂದೂ ಎಂ., ಪುರಸಭಾ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next