Advertisement

ಮಾರುತಿ ಸುಜುಕಿ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದ ಡಾ|ವೆಂಕಟರಾಮನ್‌ ಇನ್ನಿಲ್ಲ

11:13 PM Jun 26, 2022 | Team Udayavani |

ಹೊಸದಿಲ್ಲಿ: ಮಾರುತಿ ಉದ್ಯೋಗ್‌ ಲಿ. (ಈಗ ಮಾರುತಿ ಸುಜುಕಿ) ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದ ಡಾ| ವೆಂಕಟರಾಮನ್‌ ಕೃಷ್ಣಮೂರ್ತಿ ರವಿವಾರ ನಿಧನ ಹೊಂದಿದರು.

Advertisement

ಅವರಿಗೆ 97 ವರ್ಷ ವಯಸ್ಸಾಗಿತ್ತು. ಸೋಮವಾರ ಅವರ ಅಂತ್ಯಕ್ರಿಯೆ ನಡೆಯಲಿದೆ.

ಮಾರುತಿ ಸಂಸ್ಥೆಯಲ್ಲಿ ಡಾ| ವೆಂಕಟರಾಮನ್‌ ಅವರು 1985ರಿಂದ 1990ರ ವರೆಗೆ ಎಂಡಿ ಆಗಿದ್ದರು.

ತಮಿಳುನಾಡಿನಲ್ಲಿ ಜನಿಸಿದ್ದ ಅವರು “ಭಾರತದಲ್ಲಿ ಸಾರ್ವಜನಿಕ ರಂಗದ ಉದ್ದಿಮೆಗಳ ಪಿತಾಮಹ’ ಎಂಬ ಖ್ಯಾತಿಗೆ ಪಾತ್ರರಾಗಿದ್ದರು, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗಳನ್ನು ಪಡೆದಿದ್ದರು.

ಭಾರತ್‌ ಹೆವಿ ಎಲೆಕ್ಟ್ರಾನಿಕ್ಸ್‌ ಲಿ. ಸೈಲ್‌ ಮತ್ತು ಗೈಲ್‌ ಸಂಸ್ಥೆಗಳಲ್ಲಿಯೂ ಅವರು ಪ್ರಾಮುಖ್ಯ ಹುದ್ದೆಗಳನ್ನು ನಿಭಾಯಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next