Advertisement

Bangalore: ಹೋಟೆಲ್‌ ನೌಕರರಿಂದಲೇ ಉಜ್ಬೇಕಿಸ್ತಾನ ಮಹಿಳೆ ಹತ್ಯೆ

10:39 AM Mar 16, 2024 | Team Udayavani |

ಬೆಂಗಳೂರು: ಪ್ರತಿಷ್ಠಿತ ಹೋಟೆಲ್‌ವೊಂದರ ಕೊಠಡಿಯಲ್ಲಿ ತಂಗಿದ್ದ ಉಜ್ಬೇಕಿ ಸ್ತಾನ ಮಹಿಳೆ ಜರೀನಾ ಅವರನ್ನು ಕೊಲೆ ಮಾಡಿದ್ದ ಹೋಟೆ­ಲ್‌ನ ಇಬ್ಬರು ಕೆಲಸಗಾರರನ್ನು ಶೇಷಾದ್ರಿ ಪುರ ಪೊಲೀಸರು ಬಂಧಿಸಿದ್ದಾರೆ.

Advertisement

ಅಸ್ಸಾಂನ ರಾಬರ್ಟ್‌, ಅಮ್ರಿತ್‌ ಬಂಧಿತರು. ಮಹಿಳೆ ಬಳಿಯ ವಸ್ತುಗಳು ಹಾಗೂ ನಗದು ದೋ ಚುವ ಉದ್ದೇಶದಿಂದ ಮಾ.13 ರಂದು ತಡರಾತ್ರಿ ಕೊಲೆ ಮಾಡಿ ಆರೋಪಿಗಳು ಕೇರಳಕ್ಕೆ ಹೋಗಿದ್ದರು. ಈ ಮಾಹಿತಿ ಪಡೆದ ವಿಶೇಷ ತಂಡ, ಆರೋಪಿಗಳನ್ನು ವಶಕ್ಕೆ ಪಡೆದು ನಗರಕ್ಕೆ ಕರೆ ತಂದಿದೆ. ಆರೋಪಿಗಳು ಮಹಿಳೆಯ ಬಳಿಯಿದ್ದ 13,000 ರೂ. ನಗದು, 2,000 ಮುಖಬೆಲೆಯ ಹಾಗೂ 5,000 ಉಜ್ಬೇಕಿಸ್ತಾನ 3 ನೋಟುಗಳು,  ಮೊಬೈಲ್‌ ಜಪ್ತಿ ಮಾಡಲಾಗಿದೆ.

ಉಸಿರುಗಟ್ಟಿಸಿ ಹತ್ಯೆ:  ಜರೀನಾ ಪ್ರವಾಸ ಕ್ಕೆಂದು ಮಾ. 5ರಂದು ನಗರಕ್ಕೆ ಬಂದಿದ್ದರು. ಆನ್‌ಲೈನ್‌ ಮೂಲಕ ಕಾಯ್ದಿರಿಸಿ ಕೊಠಡಿಯಲ್ಲಿ ಉಳಿದು­ಕೊಂಡಿದ್ದರು. ರಾಬರ್ಟ್‌ ಹಾಗೂ ಅಮ್ರಿತ್‌, ಹೋಟೆಲ್‌ನಲ್ಲಿ ಸ್ವತ್ಛತೆ ಕೆಲಸ ಮಾಡಿಕೊಂಡಿದ್ದರು. ಮಹಿಳೆಯನ್ನು ಆಗಾಗ ಮಾತನಾಡಿ­ಸುತ್ತಿದ್ದರು. ಮಹಿಳೆ ಬಳಿ ಸಾಕಷ್ಟು ಹಣ ಹಾಗೂ ಆಭರಣ ಇರಬಹುದೆಂದು ತಿಳಿದು ರಾತ್ರಿ ಕೊಠಡಿಗೆ ನುಗ್ಗಿದ್ದ ಆರೋಪಿಗಳು, ಮಹಿಳೆ ಬಳಿಯ ನಗದು, ಇತರ ವಸ್ತುಗಳನ್ನು ಕಸಿದುಕೊಳ್ಳಲು ಮುಂದಾಗಿದ್ದರು. ಅದಕ್ಕೆ ಮಹಿಳೆ ವಿರೋಧಿಸಿದಾಗ ಉಸಿರುಗಟ್ಟಿಸಿ ಕೊಂದಿದ್ದರು. ನಂತರ, ಬಾಗಿಲು ಹೊರಗಿನಿಂದ ಲಾಕ್‌ ಮಾಡಿ ಕೊಂಡು ಸ್ಥಳದಿಂದ ಪರಾರಿಯಾಗಿದ್ದರು. ಹಲವು ಗಂಟೆಯಾದರೂ ಜರೀನಾ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡ ಹೋಟೆಲ್‌ ವ್ಯವಸ್ಥಾಪಕ, ಕೊಠಡಿ ಬಾಗಿಲು ತೆರೆದು ನೋಡಿದಾಗ ಮೃತದೇಹ ಕಂಡಿತ್ತು. ಅವರೇ ಠಾಣೆಗೆ ಮಾಹಿತಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next