Advertisement

ಉಜ್ಬೇಕಿಸ್ಥಾನ್ ಕೆಮ್ಮು ಸಿರಪ್ ಪ್ರಕರಣ: ಮರಿಯನ್ ಬಯೋಟೆಕ್‌ ಉತ್ಪಾದನಾ ಪರವಾನಗಿ ಅಮಾನತು

02:34 PM Jan 12, 2023 | Team Udayavani |

ನವದೆಹಲಿ : ಉಜ್ಬೇಕಿಸ್ಥಾನ್‌ ದಲ್ಲಿ ಮಕ್ಕಳ ಜೀವ ಕಳೆದುಕೊಳ್ಳಲು ಕಾರಣವಾಗಿದೆ ಎನ್ನಲಾದ ನೋಯ್ಡಾ ಮೂಲದ ಔಷಧೀಯ ಸಂಸ್ಥೆ ಮರಿಯನ್ ಬಯೋಟೆಕ್‌ನ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.

Advertisement

ವಿವಾದಾತ್ಮಕ ಕೆಮ್ಮಿನ ಸಿರಪ್‌ನ ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ ಎಂದು ಉತ್ತರ ಪ್ರದೇಶದ ಔಷಧ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಕೇಂದ್ರೀಯ ಏಜೆನ್ಸಿಗಳು ಮತ್ತು ಉತ್ತರ ಪ್ರದೇಶದ ಔಷಧ ವಿಭಾಗದ ತಂಡವು ಡಿಸೆಂಬರ್ 29 ರಂದು ಇಲ್ಲಿನ ಸಂಸ್ಥೆಯ ಕಚೇರಿಯಲ್ಲಿ ತಪಾಸಣೆ ನಡೆಸಿ ಆರು ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಂಡಿದ್ದರು.

ತಪಾಸಣೆಯ ಸಮಯದಲ್ಲಿ, ಕಂಪನಿಯ ಪ್ರತಿನಿಧಿಗಳು ‘ಡಾಕ್-1 ಮ್ಯಾಕ್ಸ್’ ಕೆಮ್ಮಿನ ಸಿರಪ್ ಉತ್ಪಾದನೆಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಸಾಧ್ಯವಾಗಲಿಲ್ಲ, ಆದ್ದರಿಂದ ತಕ್ಷಣವೇ ಅದರ ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ಆದೇಶ ನೀಡುವಂತೆ ಗೌತಮ್ ಬುದ್ಧ ನಗರದ ಡ್ರಗ್ ಇನ್ಸ್‌ಪೆಕ್ಟರ್ ವೈಭವ್ ಬಬ್ಬರ್ ಹೇಳಿದ್ದರು.

“ಡಿಸೆಂಬರ್ 29 ರಂದು ಆದೇಶದಂತೆ ಸಂಸ್ಥೆಯ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಈಗ ಜನವರಿ 10 ರಂದು ಸಂಸ್ಥೆಗೆ ಲಿಖಿತವಾಗಿ ಅಮಾನತು ಆದೇಶವನ್ನು ನೀಡಲಾಗಿದೆ ಮತ್ತು ಸಂಸ್ಥೆಯು ಒಪ್ಪಿಕೊಂಡಿದೆ” ಎಂದು ಬಬ್ಬರ್ ಪಿಟಿಐಗೆ ತಿಳಿಸಿದ್ದಾರೆ. ಪರೀಕ್ಷಾ ಫಲಿತಾಂಶಗಳ ಸ್ಥಿತಿಯ ಕುರಿತು ಅಧಿಕಾರಿಯು ಕೇಂದ್ರ ಏಜೆನ್ಸಿಗಳಿಂದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಅವುಗಳ ಫಲಿತಾಂಶಗಳು ಇನ್ನಷ್ಟೇ ಬರಬೇಕಿದೆ ಎಂದು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಮರಿಯನ್ ಬಯೋಟೆಕ್ ತಯಾರಿಸಿದ ಎರಡು ಕೆಮ್ಮು ಸಿರಪ್‌ಗಳನ್ನು ಮಕ್ಕಳಿಗೆ ನೀಡಬಾರದು ಎಂದು ಶಿಫಾರಸು ಮಾಡಿದೆ. ಸಿರಪ್‌ಗಳನ್ನು ಮಕ್ಕಳಿಗೆ ಬಳಸಬಾರದು, ಉತ್ಪನ್ನಗಳು ಉಜ್ಬೇಕಿಸ್ಥಾನ್‌ನ 19 ಮಕ್ಕಳ ಜೀವಗಳು ಕಳೆದುಕೊಳ್ಳಲು ಕಾರಣವಾಗಿವೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next