Advertisement

ಅಂಬೇಡ್ಕರ್‌ ಪ್ರತಿಮೆ ಭಗ್ನ: ಪೊಲೀಸರಿಂದ ವ್ಯಕ್ತಿ ಬಂಧನ

07:48 PM Jan 28, 2023 | Team Udayavani |

ಬಲ್ಲಿಯಾ: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಚೌಬೆ ಚಾಪ್ರಾ ಗ್ರಾಮದಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಭಗ್ನಗೊಳಿಸಿದ ಆರೋಪದಲ್ಲಿ ಪೊಲೀಸರು ಶನಿವಾರ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

Advertisement

“ಅಂಬೇಡ್ಕರ್‌ ಪ್ರತಿಮೆ ಭಗ್ನಗೊಳಿಸಿದ ಸಂಬಂಧ ಆರೋಪಿ ಚಂದ್ರಶೇಖರ್‌ ಸಿಂಗ್‌ನನ್ನು ಬಂಧಿಸಲಾಗಿದೆ. ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಶನಿವಾರ ಬೆಳಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.

“ಸ್ಥಳೀಯರು ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್‌ ದಾಖಲಿಸಲಾಗಿದೆ,’ ಎಂದು ಹೆಚ್ಚುವರಿ ಎಸ್‌ಪಿ ದುರ್ಗಾ ಪ್ರಸಾದ್‌ ತಿವಾರಿ ತಿಳಿಸಿದ್ದಾರೆ. “ಹಾನಿಯಾಗಿದ್ದ ಪ್ರತಿಮೆಯ ಭಾಗವನ್ನು ಸರಿಪಡಿಸಲಾಗಿದೆ. ಗ್ರಾಮದಲ್ಲಿ ಪರಿಸ್ಥತಿ ಶಾಂತಿಯುತವಾಗಿದೆ,’ ಎಂದರು.

ಇದನ್ನೂ ಓದಿ : ಜನ ಸಂಕಲ್ಪಯಾತ್ರೆ: ಅಮಿತ್ ಶಾ ಬರುತ್ತಿದ್ದಂತೆ ಮೊಳಗಿದ ಜಯಘೋಷ

Advertisement

Udayavani is now on Telegram. Click here to join our channel and stay updated with the latest news.

Next