Advertisement

ಕೇದಾರನಾಥದಲ್ಲಿ ಭಾರೀ ಹಿಮಪಾತ; ಯಾವುದೇ ಹಾನಿ ಸಂಭವಿಸಿಲ್ಲ

11:55 PM Oct 01, 2022 | Team Udayavani |

ಡೆಹ್ರಾಡೂನ್‌: ಉತ್ತರಾಖಂಡದ ಕೇದಾರನಾಥ ದೇಗುಲ ಸಮೀಪ ಶನಿವಾರ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿದ್ದು ದೇಶಾದ್ಯಂತ ಭಕ್ತರಲ್ಲಿ ಭೀತಿಗೆ ಕಾರಣ ವಾಗಿತ್ತು. ಇದರಿಂದಾಗಿ ಯಾವುದೇ ಹಾನಿ ಉಂಟಾಗಿಲ್ಲ.

Advertisement

ಬೆಳಗ್ಗೆ 6.30ರ ವೇಳೆಗೆ ಕೇದಾರನಾಥ ದೇಗುಲ ಮತ್ತು ಸ್ವರ್ಗಾರೋಹಿ ನಡುವಿನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿದೆ. ಅದು ದೇಗುಲದ ಹಿಂಭಾಗದಲ್ಲಿರುವ ಚೋರಾಬಾರಿ ಕೆರೆಗೆ ಬಿದ್ದಿದೆ.

ಅದರಿಂದಾಗಿ ಸಿಡಿದ ಹಿಮದ ಕೆಲವು ತಂಡುಗಳು ಕೆರೆ ದಂಡೆಯ ಮೇಲೆ ಸಿಡಿದಿದೆ ಎಂದು ಬದರಿನಾಥ-ಕೇದಾರನಾಥ ದೇಗುಲ ಆಡಳಿತ ಮಂಡಳಿಯ ಅಧ್ಯಕ್ಷ ಅಜೇಂದ್ರ ಅಜಯ್‌ ಹೇಳಿದ್ದಾರೆ.

2013ರಲ್ಲಿ ಉಂಟಾಗಿದ್ದ ಭೀಕರ ಪ್ರವಾಹದಂತೆಯೇ ಹಿಮಪಾತ ಉಂಟಾಯಿತೋ ಎಂಬಂತೆ ಭಕ್ತರು ಭೀತಿಗೆ ಒಳಗಾಗಿದ್ದರು. ಜಾಲತಾಣಗಳಲ್ಲಿ ಹಿಮಪಾತದ ದೃಶ್ಯ ವೈರಲ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next