Advertisement

ಉತ್ತರ ಪ್ರದೇಶ ಸಚಿವರಿಗೆ ಕಚ್ಚಿದ್ದೇನು?

01:37 AM May 03, 2022 | Team Udayavani |

ಬಂದಾ: ಆ ಸಚಿವರ ನಿವಾಸದಲ್ಲಿ ಸೋಮವಾರ ಗುಲ್ಲೋ ಗುಲ್ಲು … ಅವರಿಗೆ ಏನಾಯಿತು ಎಂದು ಸಚಿವರ ಆಪ್ತರು, ಕುಟುಂಬ ಸದಸ್ಯರ ಗಡಿಬಿಡಿಯ ಓಡಾಟ. ಕೂಡಲೇ ಅವರ ಸಿಬಂದಿ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ.

Advertisement

ಇಷ್ಟೆಲ್ಲ ರಾದ್ಧಾಂತವಾದದ್ದು ಉತ್ತರ ಪ್ರದೇಶದ ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಗಿರೀಶ್‌ಚಂದ್ರ ಯಾದವ್‌ ಅವರ ಬಂದಾ ಜಿಲ್ಲೆಯ ನಿವಾಸದಲ್ಲಿ.

ಸೋಮವಾರ ಬೆಳಗ್ಗೆ 3 ಗಂಟೆಗೆ ಏಕಾಏಕಿ ಅವರ ಕಾಲಿಗೆ ಏನೋ ಕಚ್ಚಿದೆ, ಏನೋ ಆಗುತ್ತಿದೆ ಎಂಬ ಭಾವನೆ ಅವರಲ್ಲಿ ಮೂಡಲಾರಂಭಿಸಿತು. ಕೂಡಲೇ ಆಪ್ತ ಸಿಬಂದಿಯನ್ನು ಕರೆದು ಮಾಹಿತಿ ನೀಡಿದರು.

ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಪರಿಶೀಲಿಸಿದಾಗ ಸಚಿವರಿಗೆ ಇಲಿ, ಸಣ್ಣ ಪ್ರಾಣಿ ಕಡಿದಿರುವ ಸಾಧ್ಯತೆ ಇದೆ ಎಂದು ಗೊತ್ತಾಯಿತು. ನೆಮ್ಮದಿಯ ನಿಟ್ಟುಸಿರುವ ಬಿಡುವ ಸರದಿ ಸಚಿವರದ್ದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next