Advertisement

ಝಾನ್ಸಿ ಜಿಲ್ಲೆಯಲ್ಲಿ ಮಿಡತೆಗಳ ಕಾಟ

01:06 AM May 25, 2020 | Sriram |

ನವದೆಹಲಿ: ಝಾನ್ಸಿ ಜಿಲ್ಲೆಯ ಹೊರವಲಯದಲ್ಲಿ ಶನಿವಾರ ಸಂಜೆ ಹಠಾತ್‌ ಕಾಣಿಸಿಕೊಂಡಿರುವ ಮಿಡತೆಗಳ ಸಮೂಹ ಚಲನೆಯ ಬಗ್ಗೆ ಜಿಲ್ಲಾ ಡಳಿತ ಎಚ್ಚರಿಸಿದ್ದು, ರಾಸಾಯನಿಕಗಳೊಂದಿಗೆ ಸಿದ್ಧವಾಗಿರಲು ಅಗ್ನಿಶಾಮಕ ದಳಕ್ಕೆ ನಿರ್ದೇಶನ ನೀಡಿದೆ.

Advertisement

ಮಿಡತೆ ಒಂದು ಕೀಟವಾಗಿದ್ದು, ಅದು ಬೆಳೆಗಳು ಹಾಗೂ ಸಸ್ಯವರ್ಗವನ್ನು ಸಂಪೂರ್ಣ ನಾಶಪಡಿಸುತ್ತವೆ ಎಂದು ಹೇಳಿರುವ ಜಿಲ್ಲಾಡಳಿತ, ಈ ನಿಟ್ಟಿನಲ್ಲಿ ಈಗಾಗಲೇ ತುರ್ತುಸಭೆ ನಡೆಸಿದೆ. ಸಭೆಯಲ್ಲಿ ಜಿಲ್ಲಾಧಿಕಾರಿ ಆಂಡ್ರಾವಂಸಿ ಮಾತನಾಡಿ, ಗ್ರಾಮಸ್ಥರಿಗೆ ಹಾಗೂ ಸಾಮಾನ್ಯ ಜನರಿಗೆ ಮಿಡತೆಗಳ ಕುರಿತಂತೆ ನಿಯಂತ್ರಣ ಕೊಠಡಿಗೆ ತಿಳಿಸಲು ಮನವಿ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next