Advertisement

ಉತ್ತರಪ್ರದೇಶ: ದೇವಾಲಯದ ವೃದ್ಧ ಅರ್ಚಕರೊಬ್ಬರ ಬರ್ಬರ ಹತ್ಯೆ

02:30 PM Aug 06, 2022 | Team Udayavani |

ಬಿಜ್ನೂರ್ : ಶೇರ್ ಕೋಟ್ ಎಂಬಲ್ಲಿ ದೇವಾಲಯದ ವೃದ್ಧ ಅರ್ಚಕರೊಬ್ಬರನ್ನು ಶನಿವಾರ ಬೆಳಗಿನ ಜಾವಾ ದುಷ್ಕರ್ಮಿಗಳು ಹಲ್ಲೆ ನಡೆಸಿ ಹತ್ಯೆಗೈದ ಘಟನೆ ನಡೆದಿದೆ.

Advertisement

ಎಸ್ ಪಿ ದಿನೇಶ್ ಸಿಂಗ್ ಅವರು ಹತ್ಯೆಯ ಕುರಿತು ವಿವರ ನೀಡಿದ್ದು, ಬೆಗ್ರಾಮ್ ಎಂಬ 70 ವರ್ಷ ವಯಸ್ಸಿನ ಅರ್ಚಕ ಮನೋಕಾಮನಾ ಮಂದಿರದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುತ್ತಿದ್ದ ವೇಳೆ ಬೆಳಗಿನ ಜಾವ 4.30ರ ಸುಮಾರಿಗೆ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆ. ಬೆಗ್ರಾಮ್ ಅವರು ಕೂಗುತ್ತಿದ್ದಂತೆ, ಅವರ ಪತ್ನಿ ಹೊರಗೆ ಬಂದಿದ್ದು, ಅಷ್ಟರಲ್ಲಾಗಲೇ ದಾಳಿಕೋರರು ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಬೆಗ್ರಾಮ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಘಟನೆಯ ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next