Advertisement

Bidar: ಬಲಿಷ್ಠ ಮತ್ತು ಶಕ್ತಿಶಾಲಿ ಕಾನೂನನ್ನು ಜಾರಿಗೆ ತರಲು‌ ಸರ್ಕಾರಕ್ಕೆ ಒತ್ತಾಯ

02:41 PM Oct 28, 2023 | Team Udayavani |

ಬೀದರ್: ವೈದ್ಯರ ಮೇಲೆ ಹಲ್ಲೆ ಮತ್ತು ಆಸ್ಪತ್ರೆಗಳ ದ್ಮಂಸ ಘಟನೆಗಳನ್ನು‌ ನಿಯಂತ್ರಿಸಲು ಬಲಿಷ್ಠ ಮತ್ತು ಶಕ್ತಿಶಾಲಿ ಕಾನೂನು ಜಾರಿಗೆ ತರಲು ಹಾಗೂ ಶಿಕ್ಷಾ ಅವಧಿಯನ್ನು‌ ಹೆಚ್ಚಿಸಲು ರಾಜ್ಯ ಸರ್ಕಾರದ‌ ಮೇಲೆ ಒತ್ತಡ ಹಾಕಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಎಸ್. ಶ್ರೀನಿವಾಸ್ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯರ‌ ಮೇಲೆ ಮತ್ತು ಆಸ್ಪತ್ರೆಗಳ ದ್ವಂಸದತ್ತ ಕೃತ್ಯಗಳು ದಿನೇ ದಿನೇ ಹೆಚ್ಚುತ್ತಿದ್ದು, ಇವುಗಳನ್ನು ನಿಯಂತ್ರಿಸಲು 2009ರಲ್ಲಿ ಸರ್ಕಾರ ಕಾನೂನು ಜಾರಿಗೆ ತಂದಿದೆ. ಆದರೆ, ಅದು ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಹಲ್ಲೆ ಮಾಡಿದ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ಎಂದು ಇದೆ. ಆದರೂ ಜಾಮೀನು ತೆಗೆದುಕೊಳ್ಳಲು ಈ ಕಾನೂನಿನಲ್ಲಿ ಅವಕಾಶ ಇರುವುದರಿಂದ ಈ ಕಾನೂನು ಹಲ್ಲು ಕಿತ್ತ ಹಾವಾಗಿದೆ ಎಂದರು.

ಹಾಗಾಗಿ ಇದಕ್ಕಿಂತ ಬಲಿಷ್ಠ ಮತ್ತು ಶಕ್ತಿಶಾಲಿ ಕಾನೂನನ್ನು ಜಾರಿಗೆ ತರಲು ಮತ್ತು ಶಿಕ್ಷೆ ಅವಧಿಯನ್ನು 7 ವರ್ಷಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಶಿಕ್ಷೆ ಪ್ರಮಾಣ ಹೆಚ್ಚಾದರೆ ಜಾಮೀನು ಪಡೆಯಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ನಕಲಿ‌ ವೈದ್ಯರ ಹಾವಳಿ ಹೆಚ್ಚುತ್ತಿದ್ದು, ಅಂದಾಜಿನ ಪ್ರಕಾರ 1.2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಬಗ್ಗೆ ಸರ್ಕಾರದ ಜೊತೆ ಚರ್ಚಿಸಲಾಗುವುದು ಮತ್ತು ಜಿಲ್ಲಾ ನ್ಯಾಯಾಲಯ ಅವರ ಮೇಲೆ ಶಿಸ್ತಿನ ಕ್ರಮ ಒದಗಿಸಲು‌ ಆಗ್ರಹಿಸಲಾಗುವುದು. ಜತೆಗೆ ಸಾರ್ವಜನಿಕಲ್ಲಿಯೂ ಈ ಕುರಿತಂತೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಭಾರತವು ಇಂದು ವಿಶ್ವದಲ್ಲಿಯೇ ವೈದ್ಯಕೀಯ ಟೂರಿಸಂ ಕೇಂದ್ರವಾಗಿದೆ. ತಾಯಿ ಮತ್ತು ಮಗುವಿನ ಸಾವಿನ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. 1947ರಲ್ಲಿ ಹಸುಕೂಸುಗಳ ಸಾವಿನ ಪ್ರಮಾಣ 195ರಷ್ಟಿತ್ತು, ಈಗ 26ಕ್ಕೆ ಇಳಿದಿದೆ. ತಾಯಂದಿರ ಮರಣದ ಪ್ರಮಾಣ 2001ರಲ್ಲಿ 301 ರಷ್ಟಿತ್ತು. ಈಗ ಅದು 2018-20ರಲ್ಲಿ 97ಕ್ಕೆ ಕುಸಿದಿದೆ. ಈ ಮೊದಲು ಸಂಕೀರ್ಣ ಶಸ್ತ್ರ ಚಿಕಿತ್ಸೆಗಾಗಿ ವಿದೇಶಗಳಿಗೆ ಹೋಗುತ್ತಿದ್ದರು. ಈಗ ನಮ್ಮಲ್ಲಿ ಆಗಿರುವ ವೈದ್ಯಕೀಯ ಬೆಳವಣಿಗೆಯ ಕ್ರಾಂತಿಯಿಂದಾಗಿ ವಿದೇಶಿಗರೇ ಭಾರತದತ್ತ ಹರಿದು ಬರುತ್ತಿದ್ದಾರೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next