Advertisement
ಕಲಾಪದಲ್ಲಿ ವಾಕ್ಸಮರ, ಕೈ, ಕೈ ಮಿಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಸಂಸದರು ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಸಲ್ಲಿಸಿರುವುದಾಗಿ ವರದಿ ಹೇಳಿದೆ.
Related Articles
Advertisement
ಸ್ಪೀಕರ್ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ ದಯವಿಟ್ಟು ನಾನು ಪ್ರಶ್ನೆಗೆ ಉತ್ತರ ಕೊಡುವ ಮೊದಲು ನಮ್ಮ ರಾಹುಲ್ ಗಾಂಧೀಜಿ ಅವರು, ದೇಶದ ಪ್ರಧಾನ ಮಂತ್ರಿ ಅವರ ವಿರುದ್ಧ ಬಳಸಿರುವ ಪದ ಹಾಗೂ ಹೇಳಿಕೆಯನ್ನು ಖಂಡಿಸುವುದಾಗಿ ತಿಳಿಸಿದ್ದರು. ಏತನ್ಮಧ್ಯೆ ಸ್ಪೀಕರ್ ಬಿರ್ಲಾ ಅವರು, ಉತ್ತರ ಮಾತ್ರ ನೀಡಿ ಎಂದು ಸೂಚನೆ ನೀಡಿದ್ದರು.
ನಂತರವೂ ಆರೋಗ್ಯ ಸಚಿವ ರಾಹುಲ್ ಗಾಂಧಿ ಅವರನ್ನು ಖಂಡಿಸುವ ಪ್ರಕಟಣೆ ಓದುವುದನ್ನು ಮುಂದುವರಿಸಿದಾಗ ಕಾಂಗ್ರೆಸ್ ಸದಸ್ಯರು ಸದನದ ಬಾವಿ ಬಳಿ ತೆರಳಿ ಪ್ರತಿಭಟನೆ ನಡೆಸಿದರು. ತೀವ್ರ ಕೋಲಾಹಲ, ಗದ್ದಲ ಏರ್ಪಟ್ಟಾಗ ಸ್ಪೀಕರ್ ಅವರು ಕಲಾಪವನ್ನು ಮುಂದೂಡಿದ್ದರು.
ಸದನದ ಬಾವಿ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲವು ಬಿಜೆಪಿ ಸಂಸದರು ಕೈ, ಕೈ ಮಿಲಾಯಿಸಿ, ಒಬ್ಬರು ಸಂಸದರು ಕೊಲ್ಲುವುದಾಗಿ ಬೆದರಿಯೊಡ್ಡಿರುವುದಾಗಿ ಕಾಂಗ್ರೆಸ್ ಸಂಸದರು ದೂರಿದ್ದಾರೆ.
ಸ್ಪೀಕರ್ ಓಂ ಬಿರ್ಲಾ ಅವರು ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಿ ತಕ್ಷಣವೇ ಯಾರು ಕೈ, ಕೈ ಮಿಲಾಯಿಸಿದ್ದಾರೋ ಆ ಸಂಸದರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಮಿಳುನಾಡು ಕಾಂಗ್ರೆಸ್ ಸಂಸದ ಮಾಣಿಕಂ ಟಾಗೋರ್ ತಿಳಿಸಿದರು.
ನಂತರ ಉತ್ತರ ಪ್ರದೇಶ ಬಿಜೆಪಿ ಸಂಸದ ಬ್ರಿಜಿಭೂಷಣ್ ಸಿಂಗ್ ಅವರು ಕಾಂಗ್ರೆಸ್ ಸಂಸದ ಮಾಣಿಕಂ ವಿರುದ್ಧ ದೂರು ನೀಡಿರುವುದಾಗಿ ಪಿಟಿಐ ವರದಿ ಮಾಡಿದೆ.