Advertisement

ಉಪ್ಪುಂದ: 3-4 ದಿನದ ಗಂಡು ಕರುಗಳನ್ನು ಬಿಟ್ಟು ಹೋದ ಅಪರಿಚಿತರು… ಆಹಾರ ಇಲ್ಲದೆ ಕರು ಸಾವು

12:31 AM Jun 01, 2023 | Team Udayavani |

ಉಪ್ಪುಂದ: ಹೇರೂರು ಗ್ರಾಮದ ಯರುಕೋಣೆ ಸಮೀಪದ ಆಲ್‌ ಗೆದ್ದಕೇರಿಯಲ್ಲಿ ಮೇ 31ರಂದು 3-4 ದಿನಗಳ ಗಂಡು ಕರುಗಳನ್ನು ಬಿಟ್ಟು ಘಟನೆ ನಡೆದಿದೆ.

Advertisement

ಹೈಬ್ರಿಡ್‌ ಜಾನುವಾರುಗಳಿಗೆ ಹುಟ್ಟಿದ 3-4 ದಿನಗಳ ಸುಮಾರು 10-12 ಗಂಡು ಕರುಗಳನ್ನು ಅಪರಿಚಿತರು ವಾಹನದಲ್ಲಿ ತಂದು ಆಲ್‌ ಗೆದ್ದಕೇರಿಯ ಕಲ್ಲುಪಾರಿಗಳ ಮಧ್ಯೆ ಬಿಟ್ಟು ಹೋಗಿದ್ದಾರೆ.

ಸ್ಥಳೀಯ ನಿವಾಸಿ ಶಿಕ್ಷಕ ಜಯಪ್ರಕಾಶ ಶೆಟ್ಟಿ ಅವರು ಶಾಲೆಯಿಂದ ಮನೆಗೆ ಬರುವ ಸಮಯ ಕರುಗಳ ಕೂಗಾಟ ಕೇಳಿಸಿದ್ದು ಹತ್ತಿರ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.
ಒಂದು ಕರು ನೀರು ಆಹಾರ ಇಲ್ಲದೆ ಹಸಿವಿನಿಂದ ಸತ್ತು ಹೋಗಿದೆ. ಕೆಲವು ಕರುಗಳು ಹಸಿವಿನಿಂದ ನಿತ್ರಾಣ ಗೊಂಡಿದ್ದು ಸ್ಥಳೀಯರು ನೀರು ಕುಡಿಸಿ, ಹುಲ್ಲು ನೀಡಿ ಉಪಚರಿಸಿದರು.

10-12 ಕರುಗಳನ್ನು ಬಿಟ್ಟು ಹೋಗಿರುವುದಾಗಿ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು 5 ಕರುಗಳು ಕಲ್ಲುಪಾರಿಗಳ ಮಧ್ಯೆ ಸಿಕ್ಕಿದೆ. ಇನ್ನುಳಿದ ಕರುಗಳಿಗೆ ಹುಡುಕಾಟ ನಡೆಸಲಾಗುತ್ತಿದೆ.
ನಾಗೇಶ್‌ ಯರುಕೋಣೆ ಅವರುಸಿಕ್ಕಿದ ಕರುಗಳನ್ನು ಮನೆಗೆ ತಂದು ತಾತ್ಕಾಲಿಕವಾಗಿ ಉಪ ಚರಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next