Advertisement

ಉಪ್ಪಿನಂಗಡಿ: ಹುಳವಿದ್ದ ಖಾದ್ಯ ನೀಡಿಕೆ; ಹೊಟೇಲ್‌ ಬಂದ್‌

12:11 AM Jan 13, 2023 | Team Udayavani |

ಉಪ್ಪಿನಂಗಡಿ: ಹುಳವಿದ್ದ ಚಿಕನ್‌ ಖಾದ್ಯವನ್ನು ಗ್ರಾಹಕರಿಗೆ ನೀಡಿದ್ದಾರೆಂಬ ಆರೋಪದ ಸಚಿತ್ರ ಮಾಹಿತಿಯು  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತವು ದ.ಕ. ಜಿಲ್ಲಾಧಿಕಾರಿಯರ ನಿರ್ದೇಶನದಂತೆ  ಪುತ್ತೂರು ತಹಶೀಲ್ದಾರ್‌ ನೇತೃತ್ವದ ತಂಡ  ದಾಳಿ ನಡೆಸಿ ಹೊಟೇಲ್‌ ಅನ್ನು ಮುಚ್ಚಿಸಿದ  ಘಟನೆ  ಉಪ್ಪಿನಂಗಡಿಯಿಂದ ವರದಿಯಾಗಿದೆ.

Advertisement

ಜಾಲತಾಣದಲ್ಲಿ ಬಂದ ಮಾಹಿತಿಯಂತೆ ಜಿಲ್ಲಾಡಳಿತದ ಆದೇಶದಂತೆ ಪುತ್ತೂರು ತಹಶೀಲ್ದಾರ್‌ ನಿಸರ್ಗ ಪ್ರಿಯ, ಉಪ್ಪಿನಂಗಡಿ ಉಪ ತಹಶೀಲ್ದಾರ್‌  ಚೆನ್ನಪ್ಪ ಗೌಡ ಮುಂತಾದವರು ಗುರುವಾರ ರಾತ್ರಿ ದಿಢೀರ್‌ ದಾಳಿ ನಡೆಸಿ ಆಹಾರ ಖಾದ್ಯಗಳ ತಪಾಸಣೆ ನಡೆಸಿತು. ಕೆಲವೊಂದು ಖಾದ್ಯಗಳ ಸ್ಯಾಂಪಲ್‌ಗಳನ್ನು  ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲು ಸಂಗ್ರಹಿಸಲಾಯಿತು.

ಈ ವೇಳೆ ಹೊಟೇಲ್‌ ಉದ್ಯಮಕ್ಕೆ ಸಂಬಂಧಿಸಿ ಪಂಚಾಯತ್‌ ಪರವಾನಿಗೆಯನ್ನಾಗಲಿ, ಆಹಾರ ವಿಭಾಗದ ಪರವಾನಿಗೆ, ಆರೋಗ್ಯ ಇಲಾಖಾ ಪರವಾನಿಗೆಯನ್ನು ಹೊಂದದೇ ಇರುವುದು ಕಂಡು ಬಂದಾಗ ತಹಶೀಲ್ದಾರ್‌ ರವರು  ಹೊಟೇಲನ್ನು ಮುಚ್ಚಿಸಲು  ನಿರ್ದೇಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next