Advertisement

ಉಪ್ಪಿನಂಗಡಿ ; ಶಾಲೆಗೆ ಬಿಡುವ ನೆಪದಲ್ಲಿ ಲಾಡ್ಜ್ ಗೆ ಕರೆದೊಯ್ದು ಬಾಲಕಿ‌ಯ ಅತ್ಯಾಚಾರ

09:06 PM Jun 08, 2022 | Team Udayavani |

ಉಪ್ಪಿನಂಗಡಿ : ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಕಾರಿನಲ್ಲಿ ಶಾಲೆಗೆ ಬಿಡುವ ಆಸೆ ತೋರಿಸಿ, ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರಗೈದ ಕೃತ್ಯಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ನಿವಾಸಿ 13 ವರ್ಷದ ಬಾಲಕಿಯನ್ನು ಮುನಾಸೀರ್‌ ಕಳೆದ ಮೇ 30ರಂದು ಶಾಲೆಗೆ ಕರೆದೊಯ್ಯುವೆನೆಂದು ತಿಳಿಸಿ ಕಾರಿನಲ್ಲಿ ಉಪ್ಪಿನಂಗಡಿಯ ಲಾಡ್ಜ್ ಗೆ ಕರೆದೊಯ್ದು ದೈಹಿಕ ಸಂಪರ್ಕ ನಡೆಸಿದ್ದು, ಬಳಿಕ ಜೂ. 7ರಂದು ಬಾಲಕಿಯು ಮನೆಯಿಂದ ಹೊರಟು ಶಾಲೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಯು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಉಪ್ಪಿನಂಗಡಿಯ ಲಾಡ್ಜ್ ಗೆ ಕರೆ ತಂದು ದೈಹಿಕ ಸಂಪರ್ಕ ನಡೆಸಿ ಅತ್ಯಾಚಾರವೆಸಗಿದ್ದ.

ಬಳಿಕ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸಾಯಿಸುತ್ತೇನೆಂದು ಬೆದರಿಕೆಯೊಡ್ಡಿ ಬಾಲಕಿಯನ್ನು ಉಪ್ಪಿನಂಗಡಿಯ ಬಸ್‌ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಸೈಕ್ಲಿಸ್ಟ್ ಳೊಂದಿಗೆ ಅನುಚಿತ ವರ್ತನೆ; ಆರ್.ಕೆ. ಶರ್ಮಾ ಒಪ್ಪಂದ ಕೊನೆ; ತನಿಖೆ

Advertisement

Udayavani is now on Telegram. Click here to join our channel and stay updated with the latest news.

Next