Advertisement
ಚಿತ್ರದ ಬಗ್ಗೆ ಮಾತನಾಡುವ ನಾಯಕ ಉಪೇಂದ್ರ, “ಚಂದ್ರು ಹೇಳಿದ ಕಥೆ ತುಂಬಾ ಫ್ರೆಶ್ ಎನಿಸಿತು. ಜೊತೆಗೆ ಇವತ್ತಿನ ಟ್ರೆಂಡ್ಗೆ ತುಂಬಾನೇ ಸೂಕ್ತ ಎನಿಸಿತು. ಚಂದ್ರು ತುಂಬಾ ಪ್ರೀತಿಯಿಂದ ಸಿನಿಮಾ ಮಾಡುತ್ತಾರೆ. ಅಂದುಕೊಂಡಿದ್ದು ಬರುವವರೆಗೆ ಅವರಿಗೆ ಸಮಾಧಾನವಿಲ್ಲ’ ಎಂದು ಸಿನಿಮಾ ಬಗ್ಗೆ ಹೇಳಿದರು. ನಾಯಕಿ ರಚಿತಾ ರಾಮ್ ಕೂಡಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಥೆ ಕೇಳಿ ಎಕ್ಸೆ„ಟ್ ಆಗಿ ಈ ಸಿನಿಮಾವನ್ನು ಒಪ್ಪಿಕೊಂಡಿದ್ದಾಗಿ ಹೇಳಿದರು. ನಿರ್ದೇಶಕ ಆರ್.ಚಂದ್ರು ಈ ಹಿಂದೆ ಉಪೇಂದ್ರ ಅವರ ಜೊತೆ “ಬ್ರಹ್ಮ’ ಸಿನಿಮಾ ಮಾಡಿದ್ದರು. ಈಗ ಎರಡನೇ ಸಿನಿಮಾ ಮಾಡುತ್ತಿದ್ದು, ಇದು ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ನಿರೀಕ್ಷೆ ಇದೆಯಂತೆ. ಈ ಚಿತ್ರ ತೆಲುಗಿನಲ್ಲೂ ಬಿಡುಗಡೆಯಾಗುತ್ತಿದ್ದು, ಎರಡು ಭಾಷೆಗಳಲ್ಲೂ ಟ್ರೇಲರ್ ರಿಲೀಸ್ ಮಾಡಲಾಗಿದೆ.
Advertisement
ಐ ಲವ್ ಯೂ ಟ್ರೇಲರ್ ಬಂತು
12:30 AM Jan 04, 2019 | |
Advertisement
Udayavani is now on Telegram. Click here to join our channel and stay updated with the latest news.