Advertisement

ಮಣಿಪುರ ಹಿಂಸಾಚಾರಕ್ಕೆ UPA, ಕಾಂಗ್ರೆಸ್‌ ನೀತಿಗಳೇ ಕಾರಣ: ಶೋಭಾ

10:14 PM Jul 22, 2023 | Team Udayavani |

ಹುಬ್ಬಳ್ಳಿ: ಮಣಿಪುರದ ಈಗಿನ ಹಿಂಸಾಚಾರಕ್ಕೆ ಹಿಂದೆ ಆಳ್ವಿಕೆ ನಡೆಸಿದ್ದ ಪಕ್ಷದ ನೀತಿಗಳೇ ಕಾರಣ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮಣಿಪುರದಲ್ಲಿ ಜಾತಿ, ಧರ್ಮ ಸಂಘರ್ಷ ನಡೆಯುತ್ತಲಿದೆ. ಹಿಂದಿನ ಸರಕಾರಗಳ ತಪ್ಪುಗಳ ಕಾರಣದಿಂದ ಇದೆಲ್ಲ
ನಡೆಯುತ್ತಿದೆ. ಬೇರೆ ದೇಶದ ನುಸುಳುಕೋರರು ದೊಡ್ಡ ಪ್ರಮಾಣದಲ್ಲಿ ಈಶಾನ್ಯ ಭಾಗದಲ್ಲಿದ್ದಾರೆ. ಅವರನ್ನೆಲ್ಲ ಹೊರ ಹಾಕುವ ಕೆಲಸವನ್ನು ಕೇಂದ್ರ ಸರಕಾರ ನಿರಂತರವಾಗಿ ಮಾಡುತ್ತಲಿದೆ. ಇಂತಹ ಸಂದರ್ಭದಲ್ಲಿ ಸಹಜವಾಗಿ ಆಕ್ರೋಶ, ಸಂಘರ್ಷ ನಡೆಯುತ್ತಲಿರುತ್ತದೆ ಎಂದರು.

Advertisement

ಈಶಾನ್ಯದ ಎಲ್ಲ ರಾಜ್ಯಗಳನ್ನು ಹಿಂದಿನ ಯುಪಿಎ ಮತ್ತು ಕಾಂಗ್ರೆಸ್‌ಸರಕಾರ ನಿರ್ಲಕ್ಷಿಸಿತ್ತು. ಆ ಭಾಗದ ಜನರಲ್ಲಿ ಅವರನ್ನು ಭಾರತೀಯ ರೆಂದು ಒಪ್ಪಿಕೊಳ್ಳುವ ಮಾನಸಿಕತೆ ಇರಲಿಲ್ಲ. ಈಗ ಆ ಎಲ್ಲ ರಾಜ್ಯಗಳ ಜನರು ಭಾರತ ನಮ್ಮದೆಂದು ಒಪ್ಪಿಕೊಳ್ಳುತ್ತಿದ್ದಾರೆ. ಅಲ್ಲಿ ಈಗ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಲಿವೆ. ಮೊದಲ ಬಾರಿಗೆ ಕೇಂದ್ರ ಸರಕಾರದ ಯೋಜನೆಗಳನ್ನು ಅವರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವರು ವಿದ್ರೋಹಿ ಚಟುವಟಿಕೆ ನಡೆಸುವುದಕ್ಕೆ ಅಲ್ಲಿಗೆ ಬರುತ್ತಿದ್ದಾರೆ. ಅಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದರು.

ಮಣಿಪುರ ವಿಷಯದಲ್ಲಿ ಕಾಂಗ್ರೆಸ್‌ ಸಹಿತ ಇತರ ಪಕ್ಷಗಳು ಸಂಸತ್ತಿನಲ್ಲಿ ಚರ್ಚಿಸುವುದು ಬಿಟ್ಟು ಹೊರಗೆ ಚರ್ಚಿಸುತ್ತಿವೆ. ಅವರ ಯಾವುದೇ ಪ್ರಶ್ನೆಗೂ ಉತ್ತರ ಕೊಡಲು ಕೇಂದ್ರ ಸರಕಾರ ಸಿದ್ಧವಿದೆ. ಪಶ್ಚಿಮ ಬಂಗಾಲದ ಮಾಲ್ಡಾದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿದ ಪ್ರಕರಣ ಹೊರಗೆ ಬರುತ್ತಿದೆ. ರಾಜಕಾರಣ ಎಲ್ಲರೂ ಮಾಡುತ್ತಾರೆ. ಆದರೆ ಕೊಲ್ಲುವ ರಾಜಕಾರಣ ಪಶ್ಚಿಮ ಬಂಗಾಲದಲ್ಲಿ ಮಾತ್ರ ನಡೆಯುತ್ತಲಿದೆ. ಕೇಂದ್ರ ಸರಕಾರ ವಿರುದ್ಧ ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇದರ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಕಠಿನ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಶೀಘ್ರ ವಿಪಕ್ಷ ನಾಯಕನ ಆಯ್ಕೆ
ಕರ್ನಾಟಕದಲ್ಲಿ ವಿಪಕ್ಷ ನಾಯಕನ ಆಯ್ಕೆ ಆದಷ್ಟು ಬೇಗ ನಡೆಯುತ್ತದೆ. ಕಾಂಗ್ರೆಸ್‌ನವರು ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದರು. ಕರ್ಮಯೋಗಿಗಳು ಪ್ರಧಾನಿಗಳು ಕಳೆದ 6 ಕಂತು ಗಳಲ್ಲಿ ಕೇಂದ್ರದ ಬೇರೆ ಬೇರೆ ಇಲಾಖೆಗಳಲ್ಲಿ ಉದ್ಯೋಗ ಕೊಡುವ ಕೆಲಸ ಆರಂಭಿಸಿದ್ದಾರೆ. ಆರು ಉದ್ಯೋಗ ಮೇಳಗಳಲ್ಲಿ 4.30 ಲಕ್ಷ ಮಂದಿಗೆ ಉದ್ಯೋಗ ಕೊಡಲಾಗಿದೆ. ಕೆಲಸಕ್ಕೆ ಸೇರುವವರು ಕೇವಲ ಉದ್ಯೋಗಿಗಳಲ್ಲ, ಕರ್ಮಯೋಗಿಗಳು. ಅವರೆಲ್ಲ ದೇಶಕ್ಕಾಗಿ ದುಡಿದು ಭಾರತವನ್ನು ನಂಬರ್‌ ಒನ್‌ ಮಾಡಲು ಶ್ರಮಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next