Advertisement

Lucknow: ಪೊಲೀಸರ ಕಿರುಕುಳ ಆರೋಪ; UPSC ಪರೀಕ್ಷೆಯ ತಯಾರಿಯಲ್ಲಿದ್ದ ವಿದ್ಯಾರ್ಥಿ ಆತ್ಮಹತ್ಯೆ

12:23 PM Jun 12, 2023 | Team Udayavani |

ಲಕ್ನೋ: ಮೂವರು ಪೊಲೀಸರ ಮೇಲೆ ಕಿರುಕುಳದ ಆರೋಪವನ್ನು ಮಾಡಿ ಯುಪಿಎಸ್‌ ಸಿ ಆಕಾಂಕ್ಷಿಯೊಬ್ಬ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಆಶಿಶ್ ಕುಮಾರ್ ಮೃತ ವಿದ್ಯಾರ್ಥಿ.

ಯುಪಿಎಸ್‌ ಸಿ ಪರೀಕ್ಷೆಯ ತಯಾರಿಯಲ್ಲಿದ್ದ ಆಶಿಶ್‌ ಕುಮಾರ್‌ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಪತ್ರದಲ್ಲಿ ಮೂವರು ಪೊಲೀಸರ ಹೆಸರನ್ನು ಬರೆದಿಟ್ಟಿದ್ದಾನೆ.

ಇದನ್ನೂ ಓದಿ:Mini Taj Mahal: ತಾಯಿಯ ಪ್ರೀತಿಗೆ ಗೌರವ ಸಲ್ಲಿಸಲು ʼಮಿನಿ ತಾಜ್‌ ಮಹಲ್‌ʼ ನಿರ್ಮಿಸಿದ ಮಗ

ಪ್ರಕರಣವೊಂದರಲ್ಲಿ ಆಶಿಶ್‌ ಕುಮಾರ್‌ ಅವರ ಮೇಲೆ ಸುಳ್ಳು ಆಪಾದನೆಯನ್ನು ಮಾಡಿ ಸಿಲುಕಿಸಲಾಗಿದೆ. ಈ ಬಗ್ಗೆ ಆತನಿಗೆ ಮೂವರು ಪೊಲೀಸರು ಕಿರುಕುಳ ನೀಡುತ್ತಿದ್ದರು. ಕಿರುಕುಳದಿಂದ ಬೇಸತ್ತು, ಬೇರೆ ಆಯ್ಕೆಯಿಲ್ಲದೆ ಈ ಹೆಜ್ಜೆಯನ್ನು ಇಟ್ಟಿದ್ದಾನೆ ಎಂದು ಪೊಲೀಸರು ಹೇಳಿರುವುದಾಗಿ ವರದಿ ತಿಳಿಸಿದೆ.

Advertisement

ರಹೀಮಾಬಾದ್ ಪೊಲೀಸ್‌ ಠಾಣೆಯ ಮೂವರು ಪೊಲೀಸರ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಿದ್ದು, ಈ ಪತ್ರವನ್ನು ಮೃತನ ಮನೆಯವರು ಪೊಲೀಸರಿಗೆ ನೀಡಿದ್ದಾರೆ. ವಿದ್ಯಾರ್ಥಿಯ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ ಮೂವರು ಅಧಿಕಾರಿಗಳನ್ನು ಪೊಲೀಸ್ ಲೈನ್‌ಗೆ ವರ್ಗಾಯಿಸಲಾಗಿದೆ. ಈ ಕುರಿತು ತನಿಖೆ ನಡೆಸುವಂತೆ ಎಸಿಪಿ ಮಲಿಹಾಬಾದ್ ಅವರಿಗೆ ಸೂಚಿಸಿದ್ದೇವೆ, ಆತ್ಮಹತ್ಯೆ ಪತ್ರವನ್ನು ಪರಿಶೀಲಿಸಲಾಗುವುದು ಎಂದು ಡಿಸಿಪಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next