Advertisement

ನೋಯ್ಡಾದಲ್ಲಿ ಯುಪಿ ಬಸ್ಸು ಅಪಘಾತ: 1 ಸಾವು, ಹಲವರಿಗೆ ಗಾಯ

03:13 PM Aug 28, 2018 | Team Udayavani |

ನೋಯ್ಡಾ : ಉತ್ತರ ಪ್ರದೇಶದ ಸಾರಿಗೆ ಬಸ್ಸು ಗ್ರೇಟರ್‌ ನೋಯ್ಡಾದಲ್ಲಿ ಅಪಘಾತಕ್ಕೆ ಗುರಿಯಾಗಿ ಓರ್ವ ಮೃತಪಟ್ಟು ಇತರ ಅನೇಕರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ದಾದ್ರಿ ಪೊಲೀಸ್‌ ಠಾಣೆ ವ್ಯಾಪ್ತಿಗೆ ಒಳಪಡುವ ರಾಷ್ಟ್ರೀಯ ಹೆದ್ದಾರಿ 91ರಲ್ಲಿನ ಲೋಹರಾಲಿ ಗ್ರಾಮದಲ್ಲಿ ಇಂದು ಮಂಗಳವಾರ ನಸುಕಿನ 5 ಗಂಟೆಯ ವೇಳೆಗೆ ಈ ಅವಘಡ ಸಂಭವಿಸಿದೆ. ಬಸ್ಸು ದಿಲ್ಲಿ ಮೂಲಕ ಶಹಜಹಾನ್‌ಪುರಕ್ಕೆ ತೆರಳುತ್ತಿತ್ತು. ಬಸ್‌ ಚಾಲಕ ನಿದ್ದೆಗಣ್ಣಿನಲ್ಲಿ ಇದ್ದದ್ದೇ ಅವಘಡಕ್ಕೆ ಕಾರಣವಾಯಿತೆಂದು ಪೊಲೀಸ್‌ ಅಧಿಕಾರಿ ರಾಮ್‌ ಸೇನ್‌ ಸಿಂಗ್‌ ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ರಾಮ್‌ ಕುಮಾರ್‌ (35), ಶಹಜಹಾನ್‌ಪುರ ನಿವಾಸಿ, ಎಂದು ಗುರುತಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next