Advertisement

ಅದ್ಯಪಾಡಿ ಬಳಿ ಅಪರಿಚಿತ ಯುವಕ: ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

01:44 AM Mar 24, 2020 | mahesh |

ಬಜಪೆ: ಇಲ್ಲಿನ ಅದ್ಯ ಪಾಡಿ ಬಂಟಸಾನದ ಬಳಿ ಶಂಕಾಸ್ಪದ ವಾಗಿ ತಿರುಗಾಡುತ್ತಿದ್ದ ಅಪರಿಚಿತ ಯುವಕನೋರ್ವನನ್ನು ಸ್ಥಳೀಯರು ಬಜಪೆ ಠಾಣೆಗೆ ಒಪ್ಪಿಸಿದ್ದಾರೆ.

Advertisement

ಸೋಮವಾರ ಪೂರ್ವಾಹ್ನ 9.30ರ ವೇಳೆಗೆ ಸುತ್ತಾಡುತ್ತಿದ್ದ ಈತನನ್ನು ಗ್ರಾಮಸ್ಥರು ಆಂಗ್ಲ ಬಾಷೆಯಲ್ಲಿ ವಿಚಾರಿಸಿದಾಗ ಆತ ತಮಿಳು ಭಾಷೆಯಲ್ಲಿ ಉತ್ತರಿಸಿದ. ತಾನು ರೈಲಿನಲ್ಲಿ ಬಂದಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುತ್ತಿದ್ದೇನೆ ಎಂದು ಹೇಳಿದ. ಆ ಬಗ್ಗೆ ಆತನನ್ನು$ ಮತ್ತಷ್ಟು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡದ ಕಾರಣ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು.

ಒಂದೆಡೆ ಕೊರೊನಾ ವೈರಸ್‌ ಭೀತಿ, ಇನ್ನೊಂದೆಡೆ ಈತನ ಶಂಕಾಸ್ಪದ ವರ್ತನೆಯಿಂದ ಆತಂಕಗೊಂಡ ಗ್ರಾಮಸ್ಥರು ಜವಾಬ್ದಾರಿಯಿಂದ ವರ್ತಿಸಿ ಪೊಲೀಸರಿಗೆ ಮಾಹಿತಿ ನೀಡಿದರು.

ಬಳಿಕ ಪೊಲೀಸರು ಆಗಮಿಸಿ ಈತನನ್ನು ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಪರೀಕ್ಷೆ ಮಾಡಿಸಿದ್ದಾರೆ. ಅವನಿಗೆ ಜ್ವರ ಇಲ್ಲ ಎಂಬುದು ಪರೀಕ್ಷೆಯಿಂದ ತಿಳಿದು ಬಂದಿದೆ.

ಯುವಕ ಸುಮಾರು 25ರಿಂದ 30 ವರ್ಷದೊಳಗಿನವನಾಗಿದ್ದು, ಇಲ್ಲಿಗೆ ಯಾಕೆ ಬಂದಿದ್ದ ಎಂಬುದಕ್ಕೆ ಸರಿಯಾದ ಉತ್ತರ ಸಿಕ್ಕಿಲ್ಲ. ಆತನನ್ನು ಪೊಲೀಸರು ಬಿಟ್ಟು ಕಳುಹಿಸಿದರೇ ಎಂಬ ಮಾಹಿತಿ ಸಿಕ್ಕಿಲ್ಲ

Advertisement
Advertisement

Udayavani is now on Telegram. Click here to join our channel and stay updated with the latest news.

Next