Advertisement

ಉದ್ಯಾವರ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

06:46 PM Feb 06, 2023 | Team Udayavani |

ಕಾಪು: ಉದ್ಯಾವರ ಪಡುಕೆರೆ ಕಡೇತೋಟದ ಬಳಿಯಲ್ಲಿರುವ ಪಾಪನಾಶಿನಿ ನದಿಯಲ್ಲಿ ಸುಮಾರು 40 – 45 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

Advertisement

ಪಡುಕರೆ ಕಡೇತೋಟದಲ್ಲಿರುವ ವಾರಿಜಾನ್ ಲ್ಯಾಂಡ್ಸ್ ಎಂಡ್ ಸಮೀಪದ ಪಾಪನಾಶಿನಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ತೇಲುತ್ತಿರುವ ಬಗ್ಗೆ ಸ್ಥಳೀಯರಾದ ಜಗದೀಶ್ ಪುತ್ರನ್ ಎಂಬವರು ರಾಜೇಶ್ ಶ್ರೀಯಾನ್ ಎಂಬವರಿಗೆ ಮಾಹಿತಿ ನೀಡಿದ್ದರು. ಅವರು ಸ್ಥಳಕ್ಕೆ ತೆರಳಿದ್ದು, ಬಳಿಕ ಈಶ್ವರ್ ಮಲ್ಪೆ ಮತ್ತು ಸ್ಥಳೀಯರ ಸಹಕಾರದೊಂದಿಗೆ ಮೃತ ದೇಹವನ್ನು ಮೇಲೆತ್ತಲಾಗಿದೆ.

ಮೃತದೇಹವು ಸುಮಾರು 3-4 ದಿನದ ಹಿಂದೆ ನೀರಿಗೆ ಬಿದ್ದು ಮೃತಪಟ್ಟಿರಬೇಕೆಂದು ಸಂಶಯಿಸಲಾಗಿದ್ದು ಮೃತ ದೇಹದ ಮೈಮೇಲೆ ಕಂದು ಬಣ್ಣದ ಟೀ ಶರ್ಟ್ ಮತ್ತು ಮಿಲಿಟರಿ ಯೂನಿಫಾರಂ ಬಣ್ಣದ ಬರ್ಮುಡಾ ಚೆಡ್ಡಿ ಕಂಡು ಬಂದಿದೆ. ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುವ ಸಾಧ್ಯತೆಗಳಿದ್ದು ಮೃತ ದೇಹದ ಮೈ ಮೇಲಿನ ಚರ್ಮ ಅಲ್ಲಲ್ಲಿ ಕಿತ್ತು ಬಂದಿದ್ದು ಅಲ್ಲಲ್ಲಿ ರಕ್ತಸ್ರಾವ ಆಗಿರುತ್ತದೆ.

ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಮೃತದೇಹವನ್ನು ಕಾಪುವಿನ ಸೂರಿ ಶೆಟ್ಟಿ ನೇತೃತ್ವದಲ್ಲಿ ಉಡುಪಿ ಅಜ್ಜರಕಾಡು ಶವಗಾರಕ್ಕೆ ಸಾಗಿಸಲಾಗಿದ್ದು ವಾರೀಸುದಾರರು ಇದ್ದಲ್ಲಿ ಕಾಪು ಪೊಲೀಸ್ ಠಾಣೆಯ 0820-2551033 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಪೊಲೀಸರು ವಿನಂತಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next