Advertisement

ಧಾರ್ಮಿಕ ಪ್ರತಿಭಟನೆ ನಿಲ್ಲಿಸಿ : ಭಾರತದಲ್ಲಿರುವ ಉದ್ರಿಕ್ತ ಗುಂಪುಗಳಿಗೆ ವಿಶ್ವಸಂಸ್ಥೆ ಮನವಿ

01:07 AM Jun 16, 2022 | Team Udayavani |

ವಿಶ್ವಸಂಸ್ಥೆ: ಪ್ರವಾದಿ ಮೊಹಮ್ಮದ್‌ ಪೈಗಂ ಬರ್‌ ಕುರಿತು ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಹೇಳಿಕೆ ಹುಟ್ಟಿಸಿದ ವಿವಾದ; ವಿಶ್ವಸಂಸ್ಥೆಯಲ್ಲೂ ಪ್ರತಿಧ್ವನಿಸಿದೆ. ನೂಪುರ್‌ ಹೇಳಿಕೆ ವಿರೋಧಿಸಿ ಭಾರತದಲ್ಲಿ ಮುಸ್ಲಿಮರು ನಡೆಸುತ್ತಿರುವ ಪ್ರತಿಭಟನೆಯನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆ ಮನವಿ ಮಾಡಿದೆ. ಈ ಬಗ್ಗೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಪರವಾಗಿ ವಕ್ತಾರ ಸ್ಟೆಫಾನ್‌ ಡುಜಾರಿಕ್‌ ಹೇಳಿಕೆ ನೀಡಿದ್ದಾರೆ.

Advertisement

ಮಾಧ್ಯಮಗಳಿಗೆ ಹೇಳಿಕೆ ನೀಡಿದ ಡುಜಾರಿಕ್‌, ನಾವು ಎಲ್ಲ ಧರ್ಮಗಳನ್ನು ಗೌರವಿಸುತ್ತೇವೆ. ಯಾವುದೇ ರೀತಿಯ ದ್ವೇಷಪೂರಿತ ಭಾಷಣಗಳು, ಪ್ರಚೋದನೆಗಳನ್ನು ವಿರೋಧಿಸುತ್ತೇವೆ. ಧಾರ್ಮಿಕ ಭಿನ್ನಮತದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹಿಂಸೆ ನಿಲ್ಲಬೇಕೆಂದು ಬಯಸುತ್ತೇವೆ ಎಂದಿದ್ದಾರೆ.

ಹಿಂದೂ ಅಮೆರಿಕನ್ನರು : ಭಾರತದಲ್ಲಿ ನೂಪುರ್‌ ನೀಡಿದ ಹೇಳಿಕೆ ಅಮೆರಿಕದಲ್ಲೂ ಹರಡಿದೆ. ಅಲ್ಲಿನ ಮುಸ್ಲಿಮ್‌ ಸಮುದಾಯ, ಈ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಇನ್ನೊಂದು ಕಡೆ ಅಮೆರಿಕದಲ್ಲಿನ ಹಿಂದೂ ಸಮುದಾಯ, ಇದುವರೆಗೆ ತನ್ನನ್ನು ಭಾರತೀಯ ಅಮೆರಿಕನ್ನರು ಎಂದು ಕರೆದುಕೊಳ್ಳುತ್ತಿತ್ತು. ಈಗ ಸ್ಪಷ್ಟವಾಗಿ ಹಿಂದೂ ಅಮೆರಿಕನ್ನರು ಎಂದು ಹೇಳಿಕೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next