Advertisement

ಒಂದು ಕೋಟಿ ಸೇವೆ: ಸಚಿವೆ ಸ್ಮೃತಿ ಇರಾನಿ ಬಿಡುಗಡೆ  

03:59 PM Nov 23, 2022 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೀಡಲಾಗುತ್ತಿರುವ ಸಿಎಸ್‌ಸಿ ಸೇವೆಗಳ ಹಾದಿಯಲ್ಲಿ ಒಂದು ಕೋಟಿಯ ಮೈಲುಗಲ್ಲು ದಾಖಲಾಗಿದ್ದು, ಮಂಗಳವಾರ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಸ್ಮೃತಿ ಇರಾನಿ ಅವರು ಧರ್ಮಸ್ಥಳದಲ್ಲಿ ಒಂದು ಕೋಟಿ ಮುಟ್ಟಿದ ಸೇವೆಯನ್ನು ಫಲಾನುಭವಿಗೆ ವಿತರಿಸಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದಾದ್ಯಂತ 9250 ಸಿಎಸ್‌ಸಿ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಮೂಲಕ ದಾಖಲೆಯ 1 ಕೋಟಿ ಸೇವೆಗಳನ್ನು ನೀಡಲಾಗಿದೆ. 1,00,00,000 ನೇ ಸೇವೆಯನ್ನು ಸಚಿವೆ ಇರಾನಿ ಫಲಾನುಭವಿಗೆ ಹಸ್ತಾಂತರಿಸಿದರು.

ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆ, ಡಿ.ಸುರೇಂದ್ರ ಕುಮಾರ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌.ಮಂಜುನಾಥ್‌, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅನಿಲ್‌ ಕುಮಾರ್‌, ಯೋಜನೆಯ ನಿರ್ದೇಶಕರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next