ಗ್ವಾಲಿಯರ್: ಕೇಂದ್ರ ನಾಗರಿಕ ವಿಮಾನಯಾನ ಸಚಿವ, ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ಮಾಜಿ ಸಂಸದ ಅರ್ಜುನ್ ಮಿಶ್ರಾ ಮಾಸ್ಕ್ ಧರಿಸದಿರುವುದನ್ನು ನೋಡಿ, ತಕ್ಷಣ ತಾವು ಧರಿಸಿದ್ದ ಎರಡು ಮಾಸ್ಕ್ ಗಳಲ್ಲಿ ಒಂದನ್ನು ಕಳಚಿ, ಅವರಿಗೆ ಹಾಕಿದ್ದಾರೆ.
ಹೀಗೆ ಬಳಸಿದ್ದ ಮಾಸ್ಕನ್ನು ವಿವೇಚನೆಯಿಲ್ಲದೇ ಹಾಕಿದ್ದನ್ನು ಸಾಮಾಜಿಕ ತಾಣಗಳಲ್ಲಿ ಬಲವಾಗಿ ಟೀಕಿಸಲಾಗಿದೆ.
ಇದನ್ನೂ ಓದಿ:400 ಕೋಟಿ ರೂ. ಬಜೆಟ್ನ ಚಿತ್ರಕ್ಕೆ ಪ್ರೇಮ್ ನಾಯಕ
ವಸ್ತುಸ್ಥಿತಿಯಲ್ಲಿ ಸಿಂಧಿಯಾ ಎನ್95 ದರ್ಜೆಯ ಮಾಸ್ಕ್ ಮೇಲೆ ಪ್ರತ್ಯೇಕವಾಗಿ ಸರ್ಜಿಕಲ್ ಮಾಸ್ಕ್ ಹಾಕಿಕೊಂಡಿದ್ದರು. ಅವರು ತೆಗೆದುಕೊಟ್ಟಿದ್ದು ಈ ಸರ್ಜಿಕಲ್ ಮಾಸ್ಕನ್ನು! ಇದನ್ನು ಕಾಂಗ್ರೆಸ್ ಪಕ್ಷ ಬಲವಾಗಿ ಖಂಡಿಸಿದೆ.