Advertisement

ಶೀಘ್ರದಲ್ಲಿ ಏಕ ರೂಪ ವಿದ್ಯುತ್‌ ದರ ಜಾರಿ: ಸಚಿವ ಸುನಿಲ್‌ ಕುಮಾರ್‌

09:57 PM Jul 17, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ಈ ಹಿಂದೆ ಕಾಂಗ್ರೆಸ್‌ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಗ್ರಾಮ ಪಂಚಾಯತ್‌ ಅನುಮತಿ ಕಡ್ಡಾಯ ಎಂಬುದನ್ನು “100 ದಿನ ವಿಶೇಷ ಯೋಜನೆ’ಯಡಿ ರದ್ದುಪಡಿಸುವ ಮೂಲಕ ಅನೇಕರ ಮನೆ ಬೆಳಗಿವೆ ಎಂದು ಇಂಧನ ಸಚಿವ ಸುನಿಲ್‌ ಕುಮಾರ್‌ ತಿಳಿಸಿದರು.

Advertisement

ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ವತಿಯಿಂದ ರವಿವಾರ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿದ್ಯುತ್‌ ಗುತ್ತಿಗೆದಾರರ ಸಮಾವೇಶ ಹಾಗೂ ಅಭಿನಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಸಂಘದ ವೆಬ್‌ಸೈಟ್‌ ಮತ್ತು ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವಿದ್ಯುತ್‌ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್‌ ಮಾತನಾಡಿ, ನಮ್ಮ ಸಂಘಕ್ಕೆ 100 ವರ್ಷದ ಇತಿಹಾಸವಿದೆ. ಗುತ್ತಿಗೆದಾರರ ಸಮಸ್ಯೆಗಳಿಗೆ ಸಂಘವು ಸದಕಾಲ ಶ್ರಮಿಸುತ್ತಿದೆ. ರಾಜ್ಯದಲ್ಲಿ 30 ಸಾವಿರ ವಿದ್ಯುತ್‌ ಗುತ್ತಿಗೆದಾರರಿದ್ದಾರೆ. ಅವರನ್ನು ನಂಬಿಕೊಂಡು 10 ಲಕ್ಷ ಜನರು ಕೆಲಸ ಮಾಡುತ್ತಿ¨ªಾರೆ ಎಂದು ಹೇಳಿದರು.

ಇಂಧನ ಸಚಿವ ಸುನಿಲ್‌ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು. ಸಂಘದ ಪದಾಧಿಕಾರಿಗಳಾದ ಎಂ.ಎನ್‌.ರಮೇಶ್‌, ಊರ್ಬನ್‌ ಪಿಂಟೊ, ಚಂದ್ರಬಾಬು, ಅನ್ವರ್‌ ಮಿಯಾ, ಶಿವಾನಂದ್‌ ಬಾಲಪ್ಪ, ಚಂದ್ರಬಾಬು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next