Advertisement

ಲಾರಿ ಸಮೇತ ಅನ್ಯಭಾಗ್ಯ ಅಕ್ಕಿ ಕಳವು

10:05 PM May 31, 2023 | Team Udayavani |

ಶಹಾಪುರ: ತಾಲೂಕಿನ ವಿವಿಧ ಗ್ರಾಮದ ಪಡಿತರ ಕೇಂದ್ರಗಳಿಗೆ ವಿತರಿಸಲು ಲಾರಿಯಲ್ಲಿ ಮಂಗಳವಾರ ಅನ್ನಭಾಗ್ಯ ಅಕ್ಕಿ ತುಂಬಿಕೊಂಡು ನಗರದ ಎಪಿಎಂಸಿ ಬಳಿ ನಿಲ್ಲಿಸಿದ್ದಾಗ ಕಳ್ಳರು ಅಕ್ಕಿ ಸಮೇತ ಲಾರಿ ಕಳವು ಮಾಡಿದ ಘಟನೆ ನಡೆದಿದೆ. ನಗರದ ಎಪಿಎಂಸಿಯಲ್ಲಿ ಅನ್ನಭಾಗ್ಯ ಅಕ್ಕಿ ಸರಬರಾಜು ಮಾಡುವ ನಾಲ್ಕು ಲಾರಿ ನಿಲ್ಲಿಸಲಾಗಿತ್ತು. ಅದರಲ್ಲಿ ಒಂದು ಲಾರಿಯಲ್ಲಿ 20 ಟನ್‌ (420 ಮೂಟೆ) ಅಕ್ಕಿ ಇತ್ತು. ಲಾರಿ ಚಾಲಕ ಕೀಲಿ ಬಿಟ್ಟು ಬೇರೆ ಕಡೆ ತೆರಳಿರುವುದನ್ನು ಗಮನಿಸಿದ ಕದೀಮರು ಹೊಂಚು ಹಾಕಿ ಲಾರಿ ಸಮೇತ ಅಕ್ಕಿ ಕಳವು ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಹಾಪುರ ಠಾಣೆಯಲ್ಲಿ ವಿಚಾರಣೆ ಮುಂದುವರೆದಿದ್ದು, ಲಾರಿ ಶೋಧಕ್ಕೆ ವ್ಯಾಪಕ ಜಾಲ ಬೀಸಲಾಗಿದೆ. ಕಳವಾದ ಲಾರಿಯ ದಾಖಲಾತಿ ತರಲು ತಿಳಿಸಿದ್ದು, ದಾಖಲಾತಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next