Advertisement

ಯುವ ಕಾಂಗ್ರೆಸ್‌ನಿಂದ ನಿರುದ್ಯೋಗ ದಿನಾಚರಣೆ

06:28 PM Sep 18, 2021 | Team Udayavani |

ಯಾದಗಿರಿ: ನಗರದ ಸುಭಾಶ್ಚಂದ್ರ ಬೋಸ್‌ ವೃತ್ತದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು, ಬಾಳೆಹಣ್ಣು ಮಾರುವ ಮುಖಾಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನವನ್ನು ನಿರುದ್ಯೋಗ ದಿನವನ್ನಾಗಿ ಆಚರಿಸಿದರು.

Advertisement

ಇದೇ ವೇಳೆ ಮಾಜಿ ವಿಧಾನ ಪರಿಷತ್‌ ಸದಸ್ಯ ಚೆನ್ನಾರೆಡ್ಡಿಗೌಡ ತುನ್ನೂರು ಮಾತನಾಡಿ, ವರ್ಷಕ್ಕೆ 2 ಕೋಟಿ ಉದ್ಯೋಗದ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈಗಾಗಲೇ 7 ವರ್ಷಗಳ ಅಧಿಕಾರ ನಡೆಸಿ ಯುವಕರಿಗೆ ಯಾವುದೇ ಉದ್ಯೋಗ ನೀಡದಿರುವುದು ಯುವಕರನ್ನು ನಿರುದ್ಯೋಗಿಗಳನ್ನಾಗಿಸಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಕಾರ್ಯದರ್ಶಿ ಅಬ್ದುಲ್‌ ರಜಾಕ್‌ ಮತ್ತು ಬಸ್ಸುಗೌಡ ಬಿಳಾರ, ಎನ್‌ಎಸ್‌ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜೀಯಕುಮಾರ ಕಾವಲಿ,ಜಿಲ್ಲಾ ಪ್ರಧಾನಕಾರ್ಯದರ್ಶಿ ದಾವೂದ್‌ ಪಠಾಣ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಘವೇಂದ್ರ ಸಾಹುಕಾರ, ಅವಿನಾಶ ಜಗನ್ನಾಥ, ಪ್ರಭಾಕರ್‌ ಯರಗೋಳ, ಶಹಾಪುರ ಬ್ಲಾಕ್‌ ಅಧ್ಯಕ್ಷರಾದ ಮೌನೇಶ ನಾಟೇಕಾರ, ನಿರಂಜನ್‌ ರಾಠೊಡ, ಆಕಾಶ್‌ ಠಾಣಗುಂದಿ, ಮಲ್ಲು, ನಿಂಗು, ಅಶೋಕ, ಬಸವರಾಜ, ಹಣಮಂತ, ಅಜೀಮ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next