Advertisement

ಅಂಡರ್‌-19 ವಿಶ್ವಕಪ್‌: ಕಿರೀಟ ಗೆದ್ದವರ ಕೀಳು ವರ್ತನೆ

09:58 AM Feb 11, 2020 | sudhir |

ಪೊಚೆಫ್ಸೂಮ್‌ (ದಕ್ಷಿಣ ಆಫ್ರಿಕಾ): ಭಾರತ-ಬಾಂಗ್ಲಾದೇಶ ನಡುವಿನ ಅಂಡರ್‌-19 ವಿಶ್ವಕಪ್‌ ಫೈನಲ್‌ ಪಂದ್ಯದ ಬಳಿಕ ಎರಡೂ ತಂಡಗಳ ಆಟಗಾರರು ಪರಸ್ಪರ ತಳ್ಳಾಡಿಕೊಂಡು ಗಲಾಟೆ ಮಾಡಿಕೊಂಡಿರುವ ವಿಲಕ್ಷಣ ಪ್ರಸಂಗ ನಡೆದಿದೆ.

Advertisement

ಬಾಂಗ್ಲಾದೇಶ ಗೆದ್ದ ಕೂಡಲೇ ರಾಷ್ಟ್ರಧ್ವಜಗಳನ್ನು ಕೈಯ್ಯಲ್ಲಿ ಹಿಡಿದು ನಿಂತಿದ್ದ ಆ ತಂಡದ ಆಟಗಾರರು ಮೈದಾನ ಪ್ರವೇಶಿಸಿ ಕ್ರೀಸ್‌ನತ್ತ ಓಡಿ ಬ್ಯಾಟ್ಸ್‌ಮನ್‌ಗಳನ್ನು ಬಿಗಿದಪ್ಪಿ ಕುಣಿದು ಕುಪ್ಪಳಿಸಿದರು. ಜತೆಗೆ ಅಂಗಳದಲ್ಲಿದ್ದ ಭಾರತೀಯ ಆಟಗಾರರ ಮುಂದೆ ನೃತ್ಯಗೈದು ರೇಗಿಸಿದರು. ಭಾರತೀಯ ಆಟಗಾರರು ಬಾಂಗ್ಲಾದ ಕೆಲವು ಆಟಗಾರರನ್ನು ತಳ್ಳಾಡಿದರು.

ಈ ಘಟನೆಗಳ ವೀಡಿಯೋಗಳನ್ನು ಐಸಿಸಿ ಪರಿಶೀಲಿಸಲಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭಾರತ ತಂಡದ ವ್ಯವಸ್ಥಾಪಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next