Advertisement

ತವರು ಜಿಲ್ಲೆಗೆ ಬಂದ ಉಮೇಶ್ ಕತ್ತಿ ಪಾರ್ಥಿವ ಶರೀರ : ಮುಗಿಲು ಮುಟ್ಟಿದ ಅಭಿಮಾನಿಗಳ ಆಕ್ರಂದನ

03:17 PM Sep 07, 2022 | Team Udayavani |

ಬೆಳಗಾವಿ: ಸಚಿವ ಉಮೇಶ್ ಕತ್ತಿ ಅವರ ಪಾರ್ಥಿವ ಸೇರಿರ ಶರೀರ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಸಾರ್ವಜನಿಕರು ಹಾಗೂ ಜಿಲ್ಲೆಯ ಅನೇಕ ಜನಪ್ರತಿನಿಧಿಗಳು ಅಂತಿಮ ದರ್ಶನ ಪಡೆದರು.

Advertisement

ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಬರುತ್ತಿದ್ದಂತೆ ಅಮರ್ ರಹೇ ಉಮೇಶ ಕತ್ತಿ ಎಂದು ಘೋಷಣೆ ಕೂಗಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕತ್ತಿ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.

ಉಮೇಶ ಕತ್ತಿ ಅವರ ಸಹೋದರ ರಮೇಶ ಕತ್ತಿ ಪಾರ್ಥಿವ ಶರೀರದ ಬಳಿ ಬರುತ್ತಿದ್ದಂತೆ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತು. ಅವರನ್ನು ತಬ್ಬಿಕೊಂಡು ಅನೇಕರು ಅತ್ತರು. ನಂತರ ತೆರೆಸ ವಾಹನದಲ್ಲಿ ಪಾರ್ಥಿವ ಶರೀರ ಬೆಲ್ಲದ ಬಾಗೇವಾಡಿಯತ್ತ ಪ್ರಯಾಣ ಬೆಳೆಸಿದೆ.

ಇದನ್ನೂ ಓದಿ : ಕತ್ತಿ ನಿಧನಕ್ಕೆ ಒಂದು ದಿನ ಮಾತ್ರ ಶೋಕಾಚರಣೆ: ಎಂ.ಬಿ.ಪಾಟೀಲ್ ಅಸಮಾಧಾನ

Advertisement

Udayavani is now on Telegram. Click here to join our channel and stay updated with the latest news.

Next