Advertisement

ಮುಕ್ತ ವ್ಯಾಪಾರ’ಮಾತುಕತೆಗೆ ಮರುಚಾಲನೆ

08:36 PM Oct 18, 2021 | Team Udayavani |

ಜೆರುಸಲೇಂ: ಭಾರತ ಮತ್ತು ಇಸ್ರೇಲ್‌ ನಡುವಿನ ಮುಕ್ತ ವಾಣಿಜ್ಯ ಒಪ್ಪಂದದ (ಎಫ್ ಟಿಎ)ಮಾತುಕತೆಯನ್ನು ಪುನರಾರಂಭಿಸಲು ಎರಡೂ ರಾಷ್ಟ್ರಗಳು ಒಪ್ಪಿವೆ. ಸದ್ಯಕ್ಕೆ ಇಸ್ರೇಲ್‌ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಈ ವಿಷಯ ತಿಳಿಸಿದ್ದಾರೆ.

Advertisement

ಸೋಮವಾರ ಜೈಶಂಕರ್‌, ಇಸ್ರೇಲ್‌ನ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವರೂ ಆಗಿರುವ ಯೈರ್‌ ಲಪಿಡ್‌ ಅವರನ್ನು ಭೇಟಿ ಮಾಡಿದರು. ಭೇಟಿಯ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್ ಟಿಎ ಮಾತುಕತೆಯನ್ನು ಮರುಚಾಲನೆ ಗೊಳಿಸಲಾಗುತ್ತದೆ. ದೀರ್ಘ‌ಕಾಲದಿಂದ ನಡೆಯುತ್ತಿರುವ ಈ ಒಪ್ಪಂದ ಆಧಾರಿತ ಚರ್ಚೆಗಳು ಮುಂದಿನ ಜೂನ್‌ ಹೊತ್ತಿಗೆ ನಿರ್ಣಾಯಕ ಹಂತಕ್ಕೆ ಬರಬಹುದು ಎಂದು ಆಶಿಸಿದ್ದಾರೆ.

ಇದೇ ವೇಳೆ, ಕೋವಿಡ್‌ ಭೀತಿ ನಿವಾರಣೆಯಾಗುತ್ತಿರುವ ಹಿನ್ನೆಲೆಯಲ್ಲಿ, ಎರಡೂ ದೇಶಗಳ ಪ್ರಜೆಗಳ ಭಾರತ ಮತ್ತು ಇಸ್ರೇಲ್‌ ನಡುವೆ ಸುಲಲಿತ ಪ್ರಯಾಣಕ್ಕೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ಜೈಶಂಕರ್‌ ತಿಳಿಸಿದ್ದಾರೆ.

ಇದನ್ನೂ ಓದಿ:ತಿಕೋಟಾ ತಾಲೂಕಿನಲ್ಲಿ ಮತ್ತೆ ಭೂಕಂಪನ : ಭಯಗೊಂಡು ಮನೆಯಿಂದ ಹೊರ ಓಡಿದ ಜನ

ವಿವರ ಫ‌ಲಕ ಅನಾವರಣ:
ಜೆರುಸಲೇಂ ಅರಣ್ಯದಲ್ಲಿ ಹೊಸದಾಗಿ ಅಳವಡಿಸಲಾಗಿರುವ “ಭೂಡಾನ್‌ ಗ್ರೂವ್‌’ ಎಂಬ ವಿವರ ಫ‌ಲಕವನ್ನು ಜೈಶಂಕರ್‌, ಭಾನುವಾರ ಉದ್ಘಾಟಿಸಿದರು. ಇದರಲ್ಲಿ ಭಾರತ-ಇಸ್ರೇಲ್‌ ನಡುವೆ ರಾಜತಾಂತ್ರಿಕ ಸಂಬಂಧ ಏರ್ಪಡುವ ಮುನ್ನ ಎರಡೂ ದೇಶಗಳ ನಡುವೆ ಇದ್ದ ಆತ್ಮೀಯ ಬಾಂಧವ್ಯದ ಬಗ್ಗೆ ಮಾಹಿತಿಗಳನ್ನು ಈ ಫ‌ಲಕದಲ್ಲಿ ಬರೆಯಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next