Advertisement

ಉಳ್ಳಾಲ: ಮಸೀದಿಗೆ ನುಗ್ಗಿ ಕಳ್ಳತನ, ಸಿಸಿಟಿವಿಯಲ್ಲಿ ದೃಶ್ಯ‌ ಸೆರೆ

08:25 PM Nov 02, 2022 | Team Udayavani |

ಉಳ್ಳಾಲ: ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಗ್ರಾಮದ ಅರ್ಕಾಣ ಬದ್ರಿಯಾ ಜುಮ್ಮಾ ಮಸೀದಿಗೆ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿಗಳನ್ನು ಕಳವುಗೈದಿರುವ ಘಟನೆ ನಡೆದಿದೆ.

Advertisement

ಮಂಗಳವಾರ ನಡುರಾತ್ರಿಯ ವೇಳೆಗೆ ಮಸೀದಿಯ ಪಕ್ಕದ ರೂಮ್‌ ನೊಳಗಿದ್ದ ಹಾರೆ, ಪಿಕ್ಕಾಸು ಮೂಲಕ ಆವರಣ ಗೋಡೆಯಲ್ಲಿದ್ದ ಕಾಣಿಕೆ ಡಬ್ಬಿ ಸೇರಿದಂತೆ ಒಟ್ಟು ಆರು ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ಕಳವುಗೈಯಲಾಗಿದೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಓರ್ವ ವ್ಯಕ್ತಿಯೇ ಕಳ್ಳತನ ನಡೆಸುವ ದೃಶ್ಯ ಕಂಡು ಬಂದಿದೆ.

ಮಸೀದಿಯ ಪಕ್ಕದ ರೂಮ್‌ ನಲ್ಲಿದ್ದ ಹಾರೆಯಿಂದ ಬಾಗಿಲು ಒಡೆದು ಕೃತ್ಯ ಎಸಗಿಗಿದೆ. ಸ್ಥಳಕ್ಕೆ ಶಾಸಕರಾದ ಯು.ಟಿ.ಖಾದರ್‌ ಹಾಗೂ ಪೊಲೀಸ್‌ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next