Advertisement

ಸಹಸ್ರಾರು ಭಕ್ತರ ಸಮ್ಮುಖ ಉಳವಿ ಚೆನ್ನ ಬಸವೇಶ್ವರ ರಥೋತ್ಸವ ಸಂಪನ್ನ

01:42 AM Feb 20, 2019 | |

ಜೋಯಿಡಾ: ಅಡಿಕೇಶ್ವರ ಮಡಿಕೇಶ್ವರ ಉಳವಿ ಚೆನ್ನಬಸವೇಶ್ವರ..ಹರ ಹರ ಮಹಾದೇವ.. ಎಂಬ ಘೋಷಣೆಯೊಂದಿಗೆ ಉಳವಿ ಶ್ರೀ ಚೆನ್ನಬಸವೇಶ್ವರರ ಮಹಾರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. ಸಂಜೆ 4 ಗಂಟೆಗೆ ಸಂಪ್ರದಾಯದಂತೆ ಚೆನ್ನಬಸವೇಶ್ವರರ ಮಹಾರಥಕ್ಕೆ ಪೂಜೆ ಸಲ್ಲಿಸಿದ ನಂತರ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಗಂಗಾಧರ ಕಿತ್ತೂರ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತಾದಿಗಳು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಂಡರು. ಕೆಲವರು ಹರಕೆ ಸಲ್ಲಿಸಿದರು.

Advertisement

ಈ ಬಾರಿ ರಾಜ್ಯದ ವಿವಿಧೆಡೆ ಬರದ ಛಾಯೆ ಆವರಿಸಿದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ಸುಮಾರು 40ರಿಂದ 50 ಸಾವಿರ ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next