Advertisement

“ಹರ್‌ ಘರ್‌ ಧ್ಯಾನ್‌’ಅಭಿಯಾನಕ್ಕೆ ಯುಜಿಸಿ ಸೂಚನೆ

12:04 AM Nov 26, 2022 | Team Udayavani |

ಹೊಸದಿಲ್ಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗ ವಾಗಿ ಕೇಂದ್ರ ಸರಕಾರವು ಶ್ರೀ ರವಿಶಂಕರ್‌ ಗುರೂಜಿ ಅವರ “ಆರ್ಟ್‌ ಆಫ್ ಲಿವಿಂಗ್‌’ನ ಸಹಭಾಗಿತ್ವದಲ್ಲಿ “ಹರ್‌ ಘರ್‌ ಧ್ಯಾನ'(ಪ್ರತೀ ಮನೆಯಲ್ಲೂ ಧ್ಯಾನ) ಎಂಬ ಅಭಿಯಾನ ಆರಂಭಿಸಿದೆ.

Advertisement

ಅದರಂತೆ, ಆರ್ಟ್‌ ಆಫ್ ಲಿವಿಂಗ್‌ ಅಭಿವೃದ್ಧಿಪಡಿಸಿರುವ “ಧ್ಯಾನ ಮತ್ತು ಮಾನಸಿಕ ಆರೋಗ್ಯ’ ಸೆಶನ್‌ನಲ್ಲಿ ಪಾಲ್ಗೊಳ್ಳುವಂತೆ ಉನ್ನತ ಶಿಕ್ಷಣ ಸಂಸ್ಥೆಗಳು, ಅದರಡಿ ಬರುವಂಥ ಕಾಲೇಜುಗಳ ವಿದ್ಯಾ ರ್ಥಿಗಳು, ಬೋಧಕ ಸಿಬಂದಿಗೆ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ) ಸುತ್ತೋಲೆ ಹೊರಡಿಸಿದೆ.

ಈ ಕಾರ್ಯಕ್ರಮಕ್ಕಾಗಿ ಪ್ರತೀ ವಿ.ವಿ., ಕಾಲೇಜು ಗಳೂ ಕೋರಿಕೆ ಅರ್ಜಿ ಭರ್ತಿ ಮಾಡಬೇಕು ಮತ್ತು ಹಿರಿಯ ಬೋಧಕ ಸಿಬಂದಿಯೊಬ್ಬರನ್ನು “ಧ್ಯಾನ ರಾಯಭಾರಿ’ ಎಂದು ನಿಯೋಜಿಸಬೇಕು ಎಂದೂ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next