Advertisement

Udupi: ಮಾರ್ಚ್ 29-31: ವಿಶ್ವ ಗೀತಾ ಸಮ್ಮೇಳನ

05:24 PM Mar 27, 2024 | Team Udayavani |

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃ ಷ್ಣ ಮಠ, ಶ್ರೀವಾದಿರಾಜ ಸಂಶೋಧನ ಪ್ರತಿಷ್ಠಾಪನ ಹಾಗೂ ಒರಿಸ್ಸಾದ ಲೋಕಭಾಷಾ ಪ್ರಚಾರ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಮಾ. 29 ರಿಂದ 31 ರ ವರೆಗೆ ವಿಶ್ವ ಗೀತಾ ಸಮ್ಮೇಳನ ನಡೆಯಲಿದೆ.

Advertisement

ಮಾ.29ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ರಾಜಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥಶ್ರೀ ಪಾದಂಗಳವರು ಸಮ್ಮೇಳನ ಉದ್ಘಾಟಿಸಲಿರುವರು. ಪರ್ಯಾಯ ಶ್ರೀ ಪುತ್ತಿಗೆ ಮಠದ ಕಿರಿಯ ಪಟ್ಟ ವಹಿಸಿಕೊಂಡಿರುವ ಶ್ರೀ ಸುಶೀಂದ್ರತೀರ್ಥಶ್ರೀ ಪಾದಂಗಳವರು ದಿವ್ಯ ಸಾನಿಧ್ಯ ವಹಿಸುವರು.

ವಿಶಿಷ್ಟ ಅತಿಥಿಯಾಗಿ ಒರಿಸ್ಸಾದ ಲೋಕಭಾಷಾ ಪ್ರಚಾರ ಸಮಿತಿಯ ಅಂತಾರಾಷ್ಟ್ರೀಯ ಅಧ್ಯಕ್ಷ ಡಾ. ಸದಾನಂದ ದೀಕ್ಷಿತ್‌, ಮುಖ್ಯ ಅತಿಥಿಗಳಾಗಿ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಜಯ್‌ ಕುಮಾರ್‌, ಒರಿಸ್ಸಾ ಸಂಸ್ಕೃತ ಪ್ರಧ್ಯಾಪಕ ಬಿಪಿನಬಿಹಾರೀ ಶತಪಥಿ, ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜಿನ ಉಪಪ್ರಾಚಾರ್ಯ ವಿದ್ವಾನ್‌ ಹರಿಪ್ರಸಾದ್‌ ಭಟ್‌, ರಾಜಸ್ಥಾನ ಸಂಸ್ಕೃತ ಪ್ರಧ್ಯಾಪಕ ಡಾ.ನಿರಂಜನ್‌ ಸಾಹು, ಅಸ್ಸಾಂ ಸಂಸ್ಕೃತ ಪ್ರಧ್ಯಾಪಕ ಕುಶಲ್‌ ಕಲಿತಾ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next