Advertisement

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

01:47 AM Oct 25, 2024 | Team Udayavani |

ಉಡುಪಿ: ಶೇರು ಮಾರುಕಟ್ಟೆ ಬಗ್ಗೆ ಆನ್‌ಲೈನ್‌ನಲ್ಲಿ ಬಂದ ಸಂದೇಶವನ್ನು ನಂಬಿ ಉಪ್ಪುಂದ ನಿವಾಸಿ ಭಾಸ್ಕರ ಅವರು ಹಂತಹಂತವಾಗಿ ಒಟ್ಟು 86,80,000 ರೂ.ಕಳೆದುಕೊಂಡ ಬಗ್ಗೆ ದೂರು ದಾಖಲಾಗಿದೆ.

Advertisement

ಶೇರು ಮಾರುಕಟ್ಟೆ ಬಗ್ಗೆ ಯುಟ್ಯೂಬ್‌ ಹಾಗೂ ಆನ್‌ಲೈನ್‌ನಲ್ಲಿ ಸರ್ಚ್‌ ಮಾಡುತ್ತಿದ್ದಾಗ ಯಾರೋ ಅಪರಿಚಿತರು N3-Follow me for Wealth enhancement ಎಂಬ ವಾಟ್ಸಾಪ್‌ ಗ್ರೂಪ್‌ಗೆ ಅವರ ಮೊಬೈಲ್‌ ಸಂಖ್ಯೆಯನ್ನು ಸೇರಿಸಿದ್ದರು. ಆ ವಾಟ್ಸಾಪ್‌ ಗ್ರೂಪ್‌ನಲ್ಲಿ ಬೇರೆ ಬೇರೆ ಗ್ರೂಪ್‌ಗೆ ಸೇರುವಂತಹ ಲಿಂಕ್‌ ಒಂದನ್ನು ಕಳುಹಿಸಿದ್ದರು. Investment Alliance -Core Trading ಎಂಬ ವಾಟ್ಸಾಪ್‌ ಗ್ರೂಪ್‌ನಲ್ಲಿ ಅವರಿಗೆ ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್‌ನಿಂದ ಕರೆ ಮಾಡಿ ಶೇರು ಮಾರುಕಟ್ಟೆ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ, ಹೆಚ್ಚಿನ ಲಾಭಾಂಶ ಪಡೆಯುವ ಆಸೆ ತೋರಿಸಿದರು.

ಇದನ್ನು ನಂಬಿದ ಅವರು ಆತ ಸೂಚಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಅ.1ರಿಂದ 22ರ ತನಕ ಹಂತ ಹಂತವಾಗಿ 86,80,000 ರೂ.ಗಳನ್ನು ಜಮೆ ಮಾಡಿದರು. ಆದರೆ ಆರೋಪಿಗಳು ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶ ನೀಡದೇ ನಷ್ಟ ಉಂಟು ಮಾಡಿದ್ದಾರೆ. ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next