Advertisement

Udupi; ಬಸ್‌ ಢಿಕ್ಕಿ ಹೊಡೆದು ಡಿವೈಡರ್‌ಗೆ ಹಾನಿ

01:05 AM Apr 21, 2024 | Team Udayavani |

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ ಡಿವೈಡರ್‌ಗೆ ಢಿಕ್ಕಿ ಹೊಡೆದ ಘಟನೆ ಮಣಿಪಾಲದ ಲಕ್ಷ್ಮೀಂದ್ರ ನಗರದ ಬಳಿಯ ತಿರುವಿನಲ್ಲಿ ಶನಿವಾರ ಮುಂಜಾನೆ ನಡೆದಿದೆ.

Advertisement

ಬಸ್‌ ಚಾಲಕ ಶಿವಾನಂದ ಅವರು ವೇಗದಿಂದ ಬಸ್‌ ಚಲಾಯಿಸಿಕೊಂಡು ಡಿವೈಡರ್‌ ಮಧ್ಯಭಾಗದಲ್ಲಿರುವ ಕಬ್ಬಿಣದ ತಡೆಬೇಲಿ ಹಾಗೂ ದಾರಿ ದೀಪದ ಕಂಬಕ್ಕೆ ಢಿಕ್ಕಿ ಹೊಡೆದಿದ್ದ. ಇದರಿಂದ ಜಾಹೀರಾತು ಫ‌ಲಕ ಅಳವಡಿಸಿರುವ ಸಂಸ್ಥೆಗೆ 1.15 ಲ.ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next