Advertisement

ಉಡುಪಿ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಬಂದ್‌!

03:06 PM Aug 06, 2019 | Team Udayavani |

ಹೆಬ್ರಿ: ಮಂಗಳವಾರ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಈ ಕಾರಣ ಹೆಬ್ರಿ ಸಮೀಪ ಬಂಡಿಮಠದಲ್ಲಿ ಸೀತಾನದಿ ಅಪಾಯದ ಮಟ್ಟ ಮೀರಿ ರಸ್ತೆಯಲ್ಲೇ ಹರಿಯುತ್ತಿದೆ.

Advertisement

ಇದರಿಂದಾಗಿ ಶಿವಮೊಗ್ಗ-ಉಡುಪಿ ಸಂಪರ್ಕಿಸುವ ರಾ.ಹೆ. 169 ಎ ನಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ನೀರು ಹರಿಯುತ್ತಿದ್ದರಿಂದ ವಾಹನಗಳು ಸ್ಥಳದಲ್ಲೇ ನಿಲ್ಲಬೇಕಾಯಿತು.

ಸಂಚಾರಕ್ಕೆ ಅಡಚಣೆಯಾಗಿರುವುದರಿಂದ ಶಿವಮೊಗ್ಗ-ಉಡುಪಿ ಸಂಚರಿಸುವ ವಾಹನಗಳು ಹೆಬ್ರಿ ಮಾಂಡಿ ಮೂಕೈ ಕುಚ್ಚಾರು ಸೋಮೇಶ್ವರ ಮಾರ್ಗವಾಗಿ ಸಂಚರಿಸಬೇಕಾಗಿದೆ. ಇದೇ ಮಾರ್ಗವನ್ನು ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next