Advertisement

Udupi; ಮರಳು ಕಳ್ಳತನ, ಮಾರಾಟ: ಚಾಲಕ, ಮಾಲಕ ಪೊಲೀಸ್‌ ವಶಕ್ಕೆ

09:06 PM Aug 20, 2024 | Team Udayavani |

ಉಡುಪಿ: ವಾಹನದಲ್ಲಿ ಮರಳು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ವಾಹನ ಚಾಲಕ (49) ಮತ್ತು ಮಾಲಕ ಹರೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಅಂಬಲಪಾಡಿ ಜಂಕ್ಷನ್‌ ಬಳಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ನಗರ ಠಾಣೆಯ ಉಪನಿರೀಕ್ಷಕರು ಉಡುಪಿ ಕಡೆಯಿಂದ ಅಂಬಲಪಾಡಿ ಕಡೆಗೆ ಬರುತ್ತಿದ್ದ ಟೆಂಪೋ ವಾಹನವನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ವಾಹನದ ಪರ್ಮಿಟ್‌ ಅಸಿಂಧುಗೊಂಡಿದ್ದು, ವಾಹನದಲ್ಲಿ ಅಂದಾಜು ಒಂದೂವರೆ ಟನ್‌ ತೂಕದಷ್ಟು 8,000 ರೂ. ಮೌಲ್ಯದ ಮರಳನ್ನು ಕಳವು ಮಾಡಿ, ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next