Advertisement

Udupi ನೇಜಾರು ಕೊಲೆ ಪ್ರಕರಣ: ತ್ವರಿತ ವಿಚಾರಣೆಗೆ ಮನವಿ

11:24 PM Nov 29, 2023 | Team Udayavani |

ಉಡುಪಿ: ನೇಜಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಗೆ ತ್ವರಿತಗತಿ ನ್ಯಾಯಾಲಯ ಮಂಜೂರು ಮಾಡಿ ವಿಚಾರಣೆ ನಡೆಸಿ ಹಂತಕನನ್ನು ಶಿಕ್ಷಿಸಬೇಕೆಂದು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ನಿಯೋಗವು ಜಿಲ್ಲಾ ಧಿಕಾರಿಯವರ ಮೂಲಕ ರಾಜ್ಯದ ಕಾನೂನು ಸಚಿವರಿಗೆ ಮನವಿ ಸಲ್ಲಿಸಿತು.

Advertisement

48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಪೊಲೀಸ್‌ ತಂಡಗಳ ಪರವಾಗಿ ಎಸ್‌ಪಿ ಡಾ| ಕೆ. ಅರುಣ್‌ ಕುಮಾರ್‌ ಅವರಿಗೆ ಪ್ರಶಂಸನ ಪತ್ರ ನೀಡಲಾಯಿತು. ಅನಂತರ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ನಿಯೋಗದಲ್ಲಿ ವೇದಿಕೆಯ ಗೌರವಾಧ್ಯಕ್ಷ ಎಸ್‌.ಬಿ. ದಾರಿಮಿ, ಪ್ರಧಾನ ಕಾರ್ಯದರ್ಶಿ ಮುಷ್ತಾಕ್‌ ಹೆನ್ನಾಬೈಲ್, ಝಮೀರ್‌ ಅಹ್ಮದ್‌ ರಶಾದಿ, ಇಬ್ರಾಹಿಮ್‌ ಸಾಹೇಬ್‌ ಕೋಟಾ, ಮುಹಮ್ಮದ್‌ ಇರ್ಫಾನಿ, ನಜೀರ್‌ ಬೆಳವಾಯಿ, ಅಶ್ರಫ್ ಕುಂದಾಪುರ, ಇಕ್ಬಾಲ್‌ ಹಾಲಾಡಿ, ರಫೀಕ್‌ ನಾಗೂರು, ಅಬ್ದುಲ್‌ ರೌಫ್, ತೌಫೀಕ್‌ ಗಂಗೊಳ್ಳಿ, ಅಸ್ಲಮ್‌ ಹೈಕಾಡಿ, ಉಸ್ಮಾನ್‌ ಹೈಕಾಡಿ, ಆರ್‌.ಎ. ಲೋಹಾನಿ, ಮುಹಮ್ಮದ್‌ ಮುಹಸೀನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next