Advertisement

Udupi: ಕಾರಿನಲ್ಲಿ ಬಂದಾತನಿಂದ ಮೊಬೈಲ್‌ ಕಳವು

10:17 PM May 03, 2023 | Team Udayavani |

ಉಡುಪಿ: ಅಂಗಡಿಯಲ್ಲಿಟ್ಟಿದ್ದ ಮೊಬೈಲ್‌ ಕಳವಾದ ಘಟನೆ ನಡೆದಿದೆ. ಪ್ರದೀಪ್‌ ಸ್ಯಾಮುವೆಲ್‌ ಸದಾನಂದ ಅವರು ತಮ್ಮ ಮೊಬೈಲನ್ನು ರಿಪೇರಿ ಮಾಡುವ ಸಲುವಾಗಿ ಉಡುಪಿ ಸಿಟಿ ಬಸ್‌ ನಿಲ್ದಾಣದ ಬಳಿ ಇರುವ ರಾಜ್‌ ಟವರ್‌ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಅಂಗಡಿಗೆ ಬಂದಿದ್ದರು.

Advertisement

ಅಂಗಡಿಯ ಕೌಂಟರ್‌ನಲ್ಲಿ ಮೊಬೈಲ್‌ ಇಟ್ಟು, ಇನ್ನೊಂದು ಮೊಬೈಲ್‌ಗೆ ಬಂದ ಕರೆ ಸ್ವೀಕರಿಸಿ ಮಾತನಾಡುತ್ತಿರುವಾಗ, ಇನ್ನೊವಾ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರಲ್ಲಿ ಓರ್ವ ಅಂಗಡಿಯ ಕೌಂಟರ್‌ ಮೇಲಿಟ್ಟಿದ್ದ ಮೊಬೈಲ್‌ ಅನ್ನು ಕಳವು ಮಾಡಿಕೊಂಡು ಹೋಗಿದ್ದಾನೆ.

ಕಳವಾದ ಮೊಬೈಲ್‌ನ ಅಂದಾಜು ಮೌಲ್ಯ 10,000 ರೂ. ಆಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next