Advertisement

Udupi; ಅಧಿಕ ಹಣದಾಸೆಗೆ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

06:20 PM Mar 27, 2024 | Team Udayavani |

ಉಡುಪಿ: ಅನಾಮಧೇಯ ಆ್ಯಪ್‌ ಮೂಲಕ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.

Advertisement

ಅಪರಿಚಿತ ವ್ಯಕ್ತಿಗಳು ಕಳುಹಿಸಿದ ವಾಟ್ಸಾಪ್‌ ಅಪ್ಲಿಕೇಶನ್‌ ಲಿಂಕ್‌ವೊಂದನ್ನು ಉಡುಪಿಯ ಜಗದೀಶ್‌ ಡೌನ್‌ಲೋಡ್‌ ಮಾಡಿದ್ದರು. ಆ ಬಳಿಕ ಅದರಲ್ಲಿ ಟ್ರೆಡಿಂಗ್‌ ಬಗ್ಗೆ ಮಾಹಿತಿ ನೀಡಿ ಟ್ರೆಡಿಂಗ್‌ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಲಾಗಿತ್ತು. ಇದನ್ನು ನಂಬಿದ ಅವರು ಆ್ಯಪ್‌ ಮೂಲಕ ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಫೆ.25ರಿಂದ ಮಾ.14ರ ವರೆಗೆ ಹಂತ ಹಂತವಾಗಿ 32,40,000 ರೂ. ಪಾವತಿಸಿದ್ದು, ಆದರೆ ಈ ತನಕ ಹೂಡಿಕೆ ಮಾಡಿದ ಹಣವನ್ನಾಗಿ ಅಥವಾ ಲಾಭಾಂಶವನ್ನು ನೀಡದೆ ವಂಚಿಸಿದ್ದಾರೆ. ಸೆನ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next